Webdunia - Bharat's app for daily news and videos

Install App

ರಾಜ್ಯಕ್ಕೆ 4 ಪ್ರಶಸ್ತಿ ಕನ್ನಡದ ಹೆಮ್ಮೆ:ನಾಗಾಭರಣ

Webdunia
ಮಂಗಳವಾರ, 10 ಜೂನ್ 2008 (19:12 IST)
MOKSHA
ರಾಜ್ಯಕ್ಕೆ ನಾಲ್ಕು ಸ್ವರ್ಣ ಪ್ರಶಸ್ತಿ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಾವಂತ ನಿರ್ದೇಶಕ ನಾಗಾಭರಣ ಅವರು ಇದು ಕನ್ನಡದ ಹೆಮ್ಮೆ ಎಂದಿದ್ದಾರೆ.

ಕಲ್ಲರಳಿ ಹೂವಾಗಿ ಚಿತ್ರ ನಡೆದ ಕಾಲಮಾನವನ್ನು ಗಣನೆಗೆ ತೆಗೆದುಕೊಂಡಾಗ, ಆಗ ಜಾತಿ-ಮತ-ಪಂಗಡಗಳ ನಡುವಿನ ಕಂದಕದ ಇದ್ದಿರುವುದು ಕಂಡು ಬರುತ್ತಿದೆ. ಆ ಸಂದರ್ಭದಲ್ಲಿ ನಡೆದ ಪ್ರೇಮ ಇದೆಲ್ಲವನ್ನು ಮರೆಸುತ್ತಿದೆ. ಇಂತಹ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಎಂದು ಸಂತಸ ಹಂಚಿಕೊಂಡರು.

ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಸಂತೋಷವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್, ಚಿತ್ರದಲ್ಲಿ ಅಭಿನಯಿಸಿದ ಚಿತ್ರತಂಡ ಹಾಗೂ ಚಿತ್ರವನ್ನು ಪ್ರೋತ್ಸಾಹಿದ ಎಲ್ಲರಿಗೂ ಇದರ ಯಶಸ್ಸು ಸಲ್ಲುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ 2006ರ ಸಾಲಿನ 54ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ರಾಜ್ಯಕ್ಕೆ ನಾಲ್ಕು ಸ್ವರ್ಣಕಮಲ ಪ್ರಶಸ್ತಿಗಳು ಲಭ್ಯವಾಗಿವೆ. ಕನ್ನಡದ 'ಕಾಡ ಬೆಳಂದಿಗಳು' ಹಾಗೂ ತುಳು ಭಾಷೆಯ 'ಕೋಟಿ ಚೆನ್ನಯ್ಯ' ಚಲನಚಿತ್ರ ಶ್ರೇಷ್ಠ ಪ್ರಾದೇಶಿಕ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡಿದೆ. ಅಲ್ಲದೆ, 'ಕೇರಾಫ್ ಫುಟ್ ಪಾತ್' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದರೆ, ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರವನ್ನು ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ಗುರುತಿಸಲಾಗಿದೆ. ಈ ಮೂಲಕ ರಾಜ್ಯ ಚಲನಚಿತ್ರಗಳಿಗೆ ನಾಲ್ಕು ರಾಷ್ಟ್ರಪ್ರಶಸ್ತಿ ದೊರಕಿದಂತಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments