Select Your Language

Notifications

webdunia
webdunia
webdunia
webdunia

ರಮೇಶ್ ಕುಮಾರ್‌ಗೆ ಮಂತ್ರಿಗಿರಿ ಯಾಕೆ ಕೊಟ್ಟಿಲ್ಲವೆಂದ್ರೆ, ಇಲ್ಲಿದೆ ಓದಿ

ರಮೇಶ್ ಕುಮಾರ್‌ಗೆ ಮಂತ್ರಿಗಿರಿ ಯಾಕೆ ಕೊಟ್ಟಿಲ್ಲವೆಂದ್ರೆ, ಇಲ್ಲಿದೆ ಓದಿ
, ಬುಧವಾರ, 29 ಜನವರಿ 2014 (15:26 IST)
PR
PR
ಬೆಂಗಳೂರು: ನಾನು ಶಾಸಕನಾಗೇ ಬಂದೆ, ಶಾಸಕನಾಗೇ ಹೋಗುವೆ, ಸಚಿವ ಸ್ಥಾನಕ್ಕಾಗಿ ನಾನು ಪಟ್ಟು ಹಿಡಿದಿಲ್ಲ. ಮಂತ್ರಿಗಿರಿ ಕೊಟ್ಟರೂ ಈಗಲೂ ಒಪ್ಪುವ ಮನಸ್ಥಿತಿಯಲ್ಲಿ ನಾನಿಲ್ಲ. ಸಿಎಂಗೆ ನಾನು ಕಳಂಕಿತ ಎಂಬ ಭಾವನೆ ಇರಬಹುದು. ಆದ್ದರಿಂದ ನನಗೆ ಮಂತ್ರಿಗಿರಿಯನ್ನು ಕೊಟ್ಟಿಲ್ಲ ಎಂದು ಶಾಸಕ ರಮೇಶ್ ಕುಮಾರ್ ಇಂದು ವಿಧಾನಸಭೆಯಲ್ಲಿ ಹೇಳಿದರು. ಡಿಕೆಶಿ ಮತ್ತು ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಿದರು. ಅಂದರೆ ಅವರು ಕಳಂಕಿತರಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗಿದೆ. ನನಗೆ ಸಚಿವ ಸ್ಥಾನ ನೀಡಿದರೆ ನನ್ನನ್ನೂ ಸಿಎಂ ಸಮರ್ಥಿಸಿಕೊಳ್ಳಬಹುದಿತ್ತು.

ಆದರೆ ನನಗೆ ಮಂತ್ರಿ ಸ್ಥಾನ ನೀಡದಿರುವುದರಿಂದ ಇನ್ನೂ ಕಳಂಕಿತನಾಗಿ ಉಳಿದಿದ್ದೇನೆ ಎಂದು ಶಾಸಕ ರಮೇಶ್ ಕುಮಾರ್ ಇಂದು ಅರ್ಥಗರ್ಭಿತವಾಗಿ ಹೇಳಿದಾಗ ಸದಸ್ಯರು ಸ್ವಲ್ಪ ಹೊತ್ತು ನಗೆಗಡಲಲ್ಲಿ ಮುಳುಗಿದರು.

Share this Story:

Follow Webdunia kannada