Select Your Language

Notifications

webdunia
webdunia
webdunia
webdunia

ಯುವತಿಯ ಕೊಲೆ ಯತ್ನ: ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿ ಸಾವು

ಯುವತಿಯ ಕೊಲೆ ಯತ್ನ: ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿ ಸಾವು
, ಮಂಗಳವಾರ, 1 ಏಪ್ರಿಲ್ 2014 (12:45 IST)
ಬೆಂಗಳೂರು: ಮಂಜುಳಾ ಎಂಬ ಯುವತಿಯ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಪ್ರಯತ್ನ ನಡೆಸಿದ ಘಟನೆ ಬೆಂಗಳೂರಿನ ಉಳ್ಳಾಲದ ಉಪನಗರದಲ್ಲಿ ನಡೆದಿದೆ. ಬೆಳಿಗ್ಗೆ ಸಿಲಿಂಡರ್ ಸ್ಫೋಟ ಎಂಬ ವದಂತಿ ಹರಡಿತ್ತು. ಆದರೆ ಇದು ಕೊಲೆ ಪ್ರಯತ್ನ ಎನ್ನುವುದು ತಿಳಿದುಬಂದಿದೆ. ಮಧು ಎಂಬವ ಮಂಜುಳಾ ಮೈಗೆ ಬೆಂಕಿಹಚ್ಚಿ ಕೊಲೆ ಮಾಡುವ ಯತ್ನ ಮಾಡಿದ್ದ. ಮಂಜುಳಾ ಮೈಗೆ ಬೆಂಕಿಹೊತ್ತಿಕೊಂಡು ಕೂಗಿಕೊಂಡಿದ್ದನ್ನು ಕೇಳಿ ಮನೆಯ ಹೊರಗೆ ಕೆಲಸ ಮಾಡುತ್ತಿದ್ದ ನಾಗಾ ಎಂಬ ಯುವಕ ಅವಳನ್ನು ರಕ್ಷಿಸಲು ಯತ್ನಿಸಿದಾಗ ಅವನ ಮೈಗೆ ಬೆಂಕಿಹೊತ್ತಿಕೊಂಡು ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾನೆ. ಮಂಜುಳಾ ಮಧುಗೆ 3 ಲಕ್ಷ ರೂ. ಸಾಲ ನೀಡಿದ್ದು ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಆಕ್ರೋಶ ಗೊಂಡ ಮಧು ಮಂಜುಳಾ ಕೊಲೆ ಮಾಡುವ ಸಂಚು ರೂಪಿಸಿದ್ದ.

ಶೇ. 80ರಷ್ಟು ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಮಂಜುಳಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವಳು ಬದುಕುಳಿಯುವ ಸಾಧ್ಯತೆ ಕಡಿಮೆಯೆಂದು ಹೇಳಲಾಗುತ್ತಿದೆ. ಮಧುವಿನ ಮೈಗೂ ಕೂಡ ಬೆಂಕಿ ಹತ್ತಿಕೊಂಡಿದ್ದು, ಅವನನ್ನು ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share this Story:

Follow Webdunia kannada