Select Your Language

Notifications

webdunia
webdunia
webdunia
webdunia

ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದೆ: ಚಿತ್ರ ನಟಿ ಶ್ರುತಿ

ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದೆ: ಚಿತ್ರ ನಟಿ ಶ್ರುತಿ
, ಶುಕ್ರವಾರ, 20 ಸೆಪ್ಟಂಬರ್ 2013 (15:21 IST)
PR
PR
ಬೆಂಗಳೂರು: ಚಿತ್ರನಟಿ ಶ್ರುತಿ-ಚಂದ್ರಚೂಡ್ ಮದುವೆಯನ್ನು ರದ್ದು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ. ವಿವಾಹ ರದ್ದು ಕೋರಿ ಚಂದ್ರಚೂಡ್ ಅವರ ಮೊದಲ ಪತ್ನಿ ಮಂಜುಳಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಚಂದ್ರಚೂಡ್ ಮೊದಲ ಪತ್ನಿ ಮಂಜುಳಾಗೆ ವಿಚ್ಛೇದನ ನೀಡದೇ ಎರಡನೇ ಮದುವೆಯಾಗಿರುವುದು ಕಾನೂನುಬಾಹಿರವೆಂದು ಪತ್ನಿ ಮಂಜುಳಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಶ್ರುತಿ ಕೂಡ ಈ ವಿವಾಹ ರದ್ಧತಿಗೆ ಆಕ್ಷೇಪಣೆ ಇಲ್ಲವೆಂದೂ ತಿಳಿಸಿದ್ದರು. ಚಂದ್ರಚೂಡ್ ಸಹ ವಿವಾಹ ರದ್ದತಿಗೆ ಆಕ್ಷೇಪವಿಲ್ಲವೆಂದು ತಿಳಿಸಿದ್ದರು.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಈ ಮದುವೆ ರದ್ದು ಮಾಡಿದ ತೀರ್ಪು ನೀಡಿದೆ. ಈ ತೀರ್ಪಿನಿಂದ ತಮ್ಮ ನೋವು ಕಡಿಮೆಯಾಗಿದೆ ಎಂದು ನನಗೆ ಅನಿಸುತ್ತಿದೆ. ನನ್ನಿಂದ ಇನ್ನೊಬ್ಬರಿಗೆ ಅನ್ಯಾಯವಾಗುವುದು ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದಂತಾಯಿತು ಎಂದು ಶ್ರುತಿ ಹೇಳಿದ್ದಾರೆ.

Share this Story:

Follow Webdunia kannada