Select Your Language

Notifications

webdunia
webdunia
webdunia
webdunia

ಮೋದಿ ಸಂಪುಟದಲ್ಲಿ ಯಡಿಯೂರಪ್ಪ ಕ್ಯಾಬಿನೆಟ್ ಸಚಿವರಾಗ್ಬೇಕು: ಈಶ್ವರಪ್ಪ ಬ್ಯಾಟಿಂಗ್

ಮೋದಿ ಸಂಪುಟದಲ್ಲಿ ಯಡಿಯೂರಪ್ಪ ಕ್ಯಾಬಿನೆಟ್ ಸಚಿವರಾಗ್ಬೇಕು: ಈಶ್ವರಪ್ಪ ಬ್ಯಾಟಿಂಗ್
, ಶನಿವಾರ, 25 ಜನವರಿ 2014 (16:35 IST)
PR
PR
ಶಿವಮೊಗ್ಗ: ರಾಜ್ಯದ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡಿದ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಸೆ. ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ನಿಂತು ಗೆದ್ದುಬರಬೇಕು ಎಂದು ಯಡಿಯೂರಪ್ಪ ಪರ ಈಶ್ವರಪ್ಪ ಬ್ಯಾಟಿಂಗ್ ಮಾಡಿದ್ದಾರೆ. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರದ ಗದ್ದುಗೆಗೆ ಏರಿ ನರೇಂದ್ರ ಮೋದಿ ಪ್ರಧಾನಿಯಾಗುವ ಗಳಿಗೆಯಲ್ಲಿ ಯಡಿಯೂರಪ್ಪ ಕ್ಯಾಬಿನೆಟ್ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರೆ ನಮ್ಮೆಲ್ಲರ ಭಾಗ್ಯ ಎಂದು ಈಶ್ವರಪ್ಪ ಹೇಳಿದರು.

ಯಡಿಯೂರಪ್ಪ ಈ ಕುರಿತು ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲೇ ಎಲ್ಲೇ ಹೋದರೂ ಜನ ನನ್ನ ಗುರ್ತಿಸುತ್ತಾರೆ.ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ, ನನ್ನ ಆಸೆ ಏನೆಂದರೆ ಬಿಜೆಪಿ ಪರವಾಗಿ ಆದಷ್ಟು ಸದಸ್ಯರನ್ನು ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲಿಸಿ ದೆಹಲಿಗೆ ಕಳಿಸುವುದಾಗಿ ಎಂದು ಯಡಿಯೂರಪ್ಪ ಹೇಳಿದರು.

Share this Story:

Follow Webdunia kannada