Select Your Language

Notifications

webdunia
webdunia
webdunia
webdunia

ಮೋದಿ ಅಬ್ಬರದ ನಡುವೆ ಬಿಜೆಪಿ ಅತಿರಥರು ಮೂಲೆಗುಂಪು: ಎಸ್.ಎಂ.ಕೃಷ್ಣ

ಮೋದಿ ಅಬ್ಬರದ ನಡುವೆ ಬಿಜೆಪಿ ಅತಿರಥರು ಮೂಲೆಗುಂಪು: ಎಸ್.ಎಂ.ಕೃಷ್ಣ
, ಬುಧವಾರ, 9 ಏಪ್ರಿಲ್ 2014 (17:04 IST)
PR
PR
ದಾವಣಗೆರೆ: ಬಿಜೆಪಿಯಲ್ಲಿ ನರೇಂದ್ರ ಮೋದಿ ಅಬ್ಬರದ ನಡುವೆ ಅತಿರಥ ಮಹಾರಥ ಮುಖಂಡರು ಮೂಲೆಗುಂಪಾಗಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಿದ್ದ ಎಸ್.ಎಂ. ಕೃಷ್ಣ,, ಮೋದಿ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಮೋದಿ ಎಂದು ಬಿಂಬಿಸುವ ಕೆಲಸ ನಡೆಯುತ್ತಿದ್ದು ಉಳಿದೆಲ್ಲ ಮುಖಂಡರು ಗೌಣವಾಗಿದ್ದಾರೆ.ಆದರೆ ಇದು ಎಷ್ಟರಮಟ್ಟಿಗೆ ನಿಜವೆನ್ನುವುದು ಮೇ 16ರ ನಂತರ ಸ್ಪಷ್ಟವಾಗಲಿದೆ.

ಮೋದಿ ಅಲೆ ಎಲ್ಲಿ ಬೀಸುತ್ತಿದೆ ಎಂದು ನಾನು ಹುಡುಕತ್ತಲೇ ಇದ್ದೀನಿ. ಆದರೆ ಮಾಧ್ಯಮಗಳಲ್ಲಿ ಮಾತ್ರ ಮೋದಿ ಅಲೆ ಕಾಣಿಸಿಕೊಳ್ಳುತ್ತಿದೆ. ಬೇರೆಲ್ಲೂ ಅದರ ಸುಳಿವಿಲ್ಲ. ಆ ಪಕ್ಷದ ಅಭಿಮಾನಿಗಳಲ್ಲಿ ಮೋದಿ ಅಲೆ ಇದ್ದರೂ ಜನಗಳಿಗೆ ಅಂತಹ ಭಾವನೆಯಿಲ್ಲ ಎಂದು ಕೃಷ್ಣ ಹೇಳಿದರು. ಮೋದಿ ಅಬ್ಬರದ ನಡುವೆ ಬಿಜೆಪಿಯ ಪ್ರಮುಖ ಮುಖಂಡರಾದ ಅಡ್ವಾಣಿ ಕೇಳಿದ ಕ್ಷೇತ್ರವನ್ನು ಅವರಿಗೆ ನೀಡದೇ ಬಿಜೆಪಿ ಸೂಚಿಸಿದ ಕ್ಷೇತ್ರದಲ್ಲೇ

Share this Story:

Follow Webdunia kannada