ಬೆಳಗಾವಿ: ಕಬ್ಬಿಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕು. ಈಗಾಗಲೇ ಮೂರು ತಿಂಗಳಿಂದ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರ ಅವರ ನೆರವಿಗೆ ಬರಬಹುದೆಂದು ಅವರು ನಿರೀಕ್ಷೆ ಹೊಂದಿದ್ದರು. ಮೂರು ದಿನಗಳಿಂದ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಸರ್ಕಾರಕ್ಕೆ ಹೇಳಲು ಬಯಸ್ತೇನೆ. ಇಂತಹ ಮೊಂಡುತನವನ್ನು ಬಿಡಿ. ಹಿಂದಿನ ಸರ್ಕಾರ ರೈತರಿಗೆ ಗುಂಡಿಕ್ಕಿ ಕೊಂದಿದೆ.
ಇವತ್ತು ಕಾಂಗ್ರೆಸ್ ಸರ್ಕಾರ ರೈತರಿಗೆ ವಿಷವನ್ನು ಉಣಿಸುವ ಮೂಲಕ ರೈತರನ್ನು ಬಲಿತೆಗೆದುಕೊಳ್ಳಲು ಮುಂದಾಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಜೆಡಿಎಸ್ನಿಂದ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಕುಮಾರಸ್ವಾಮಿ ಘೋಷಿಸಿದರು.