Select Your Language

Notifications

webdunia
webdunia
webdunia
webdunia

ಮೈಸೂರು ಲೋಕಸಭೆ ಕಣಕ್ಕೆ ಪ್ರಮೋದಾ ದೇವಿಗೆ ಗಾಳ ಹಾಕಿದ ಜೆಡಿಎಸ್

ಮೈಸೂರು ಲೋಕಸಭೆ ಕಣಕ್ಕೆ ಪ್ರಮೋದಾ ದೇವಿಗೆ ಗಾಳ ಹಾಕಿದ ಜೆಡಿಎಸ್
, ಮಂಗಳವಾರ, 17 ಡಿಸೆಂಬರ್ 2013 (13:31 IST)
PR
PR
ಬೆಂಗಳೂರು: ಮೈಸೂರಿನ ರಾಜಮನೆತನದ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿಯವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಈ ಕುರಿತು ಮಹಾರಾಣಿ ಪ್ರಮೋದಾ ದೇವಿಗೆ ಜೆಡಿಎಸ್ ಮನವೊಲಿಕೆ ಯತ್ನವನ್ನು ಮಾಡಿದೆ. ಒಡೆಯರ್ ನಿಧನದ ನಂತರ ಸಹಾನುಭೂತಿ ಮತಗಳು ಪ್ರಮೋದಾ ದೇವಿ ಪರವಾಗಿ ಬಿದ್ದು, ಜೆಡಿಎಸ್‌ಗೆ ಪ್ಲಸ್ ಪಾಯಿಂಟ್ ಆಗಬಹುದು ಎಂಬ ಆಸೆ ಜೆಡಿಎಸ್‌ನಲ್ಲಿ ಗರಿಗೆದರಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡಲು ಗೌಡರ ಗಾಳಹಾಕಿದ್ದಾರೆಂದು ಈ ಬೆಳವಣಿಗೆಯನ್ನು ಅರ್ಥೈಸಲಾಗುತ್ತಿದೆ.

ಮೈಸೂರು-ಕೊಡಗು ಲೋಕಸಭೆಗೆ ಪ್ರಮೋದಾ ದೇವಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವಲಯದಲ್ಲಿ ತೀವ್ರ ಪ್ರಯತ್ನ ನಡೆಯುತ್ತಿದೆ. ಒಡೆಯರ್ ಅವರ ನಿಧನದ ನೋವಿನಿಂದ ಇನ್ನೂ ಹೊರಬರದ ಪ್ರಮೋದಾ ದೇವಿ ಸದ್ಯಕ್ಕೆ ಮೌನ ವಹಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಮಾದೇಗೌಡ, ಜಿ.ಟಿ.ದೇವೇಗೌಡ ಈ ಕುರಿತು ಪ್ರಯತ್ನ ನಡೆಸಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada