Select Your Language

Notifications

webdunia
webdunia
webdunia
webdunia

ಮೈಸೂರು: ಕೇರಳ ಕುಟುಂಬದ ಐವರ ಆತ್ಮಹತ್ಯೆ

ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು

ಮೈಸೂರು: ಕೇರಳ ಕುಟುಂಬದ ಐವರ ಆತ್ಮಹತ್ಯೆ
ಮೈಸೂರು , ಸೋಮವಾರ, 8 ಸೆಪ್ಟಂಬರ್ 2008 (12:09 IST)
ಕೇರಳ ಮೂಲದ ಕುಟುಂಬವೊಂದರ ಇಬ್ಬರು ಮಹಿಳೆಯರು ಸೇರಿದಂತೆ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಸಂಗಂ ಚಿತ್ರ ಮಂದಿರ ಸಮೀಪದಲ್ಲಿನ ಆದಿಮ್ಯಾನರ್ ವಸತಿಗೃಹದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳನ್ನು ಕೆಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಕೇರಳ ರಾಜ್ಯದ ಆಲಪುರ ಜಿಲ್ಲೆಯವರಾದ ಬಾಲಕೃಷ್ಣ ಪಣಿಕರ್ ಮತ್ತು ಅವರ ಪತ್ನಿ ರತ್ನಮ್ಮ, ಇವರ ಮಗ ವಿಜಯನ್ ನಂಬಿ, ಸೊಸೆ ಇಂದು ಹಾಗೂ ಜೊತೆಯಲ್ಲಿ ಬಂದಿದ್ದ ಸಂಬಂಧಿ ಮಹಿಳೆ ಬಿಂದು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಬೆಳಗಿನ ಜಾವ ಬಾಲಕಿ ಅನುಪಮಾ ಎಚ್ಚರಗೊಂಡಾಗ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಗಾಬರಿಗೊಂಡಳು. ಕೂಡಲೇ ಹೊಟೇಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇನ್ನೊಬ್ಬ ಬಾಲಕಿ ಅಖಿಲಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಘಟನೆಯನ್ನು ಕೈಗೆತ್ತಿಕೊಂಡಿರುವ ಮೈಸೂರು ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada