Select Your Language

Notifications

webdunia
webdunia
webdunia
webdunia

ಮೇಕೆ ಹೊಲಕ್ಕೆ ನುಗ್ಗಿದ್ದೇ ತಪ್ಪಾಯ್ತು: ಮಹಿಳೆಯ ಸಜೀವ ದಹನ

ಮೇಕೆ ಹೊಲಕ್ಕೆ ನುಗ್ಗಿದ್ದೇ ತಪ್ಪಾಯ್ತು: ಮಹಿಳೆಯ ಸಜೀವ ದಹನ
, ಗುರುವಾರ, 28 ನವೆಂಬರ್ 2013 (16:54 IST)
PR
PR
ಚಿತ್ರದುರ್ಗ: ಮೇಕೆ ಹೊಲಕ್ಕೆ ನುಗ್ಗಿದ ತಪ್ಪಿಗೆ ಮೇಕೆಯ ಮಾಲೀಕರಾದ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ. ಮೇಕೆ ಗ್ರಾಮಪಂಚಾಯತ್ ಸದಸ್ಯ ಮೂರ್ತಿಯ ಹೊಲಕ್ಕೆ ನುಗ್ಗಿದ್ದರಿಂದ ರೊಚ್ಚಿಗೆದ್ದ ಕಿರಾತಕ ಮೂರ್ತಿ ರಾಜಮ್ಮ ಎಂಬ ಮಹಿಳೆಯ ಮನೆಗೆ ನುಗ್ಗಿ ಮಲಗಿದ್ದವಳನ್ನು ಎಳೆದುಕೊಂಡು ಹೋಗಿ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಗ್ರಾಮಪಂಚಾಯತ್ ಸದಸ್ಯನಾಗಿರುವ ಮೂರ್ತಿ ಮಹಿಳೆಯನ್ನು ಹೊರಕ್ಕೆ ಕರೆದು ಮೇಕೆ ನುಗ್ಗಿದ್ದಕ್ಕೆ ಜಗಳವಾಡಿದ. ಈ ಜಗಳ ಕೊನೆಯಲ್ಲಿ ಕೊಲೆಗೆ ತಿರುಗಿತು.

ಹೊಸದುರ್ಗ ತಾಕೂಲಿನ ಬೋವಿಹಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೂರ್ತಿ ಸುಳಿವು ಪತ್ತೆಯಾಗಿಲ್ಲ. ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಾಜಮ್ಮ ನಿಧನರಾಗಿದ್ದಾರೆ.

Share this Story:

Follow Webdunia kannada