Webdunia - Bharat's app for daily news and videos

Install App

ಮೃತ ಪ್ರಿಯತಮೆ ಕೊರಳಿಗೆ ತಾಳಿ ಕಟ್ಟಿದ ಪ್ರಿಯಕರ !

Webdunia
ಬುಧವಾರ, 2 ಫೆಬ್ರವರಿ 2011 (12:06 IST)
ಪ್ರಿಯಕರನ ಪೋಷಕರು ವರದಕ್ಷಿಣೆ ಬೇಕೆಂದು ಪಟ್ಟು ಹಿಡಿದುದರಿಂದ ಹತಾಶಳಾಗಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಳು. ಮತ್ತೊಂದೆಡೆ ಪ್ರಿಯಕರ ಆಕೆಯ ಶವಕ್ಕೆ ಮಾಂಗಲ್ಯ ಕಟ್ಟಿ ನಾಪತ್ತೆಯಾಗಿರುವ ವಿಲಕ್ಷಣ ಘಟನೆ ಚಿಕ್ಕಬಾಣಸವಾಡಿಯಲ್ಲಿ ನಡೆದಿದೆ.

ವಾಸಂತಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ತಾಳಿ ಕಟ್ಟಿ ಪರಾರಿಯಾದವನು ತಮಿಳುನಾಡಿನ ಗುಡಿಯಾತಮ್ ಮೂಲದ ಪ್ರದೀಪ.

ವಾಸಂತಿ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ಪ್ರದೀಪ ಆಕೆಯ ಅಣ್ಣ ವಿಜಯ ಕುಮಾರನ ಸ್ನೇಹಿತನಾಗಿದ್ದ. ಕಳೆದ ಮೂರು ವರ್ಷಗಳಿಂದ ವಾಸಂತಿಯನ್ನು ಪ್ರೀತಿಸುತ್ತಿದ್ದ. ಆರು ತಿಂಗಳ ಹಿಂದೆ ಇಬ್ಬರ ಪ್ರೀತಿ ಬಯಲಾಗಿ ಆಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಆಕೆಯ ಅಣ್ಣಂದಿರಿಗೆ ಪ್ರದೀಪ ಭರವಸೆ ಕೊಟ್ಟಿದ್ದ.

ಮದುವೆ ಮಾತುಕತೆ ವೇಳೆ ಪ್ರದೀಪನ ಪೋಷಕರು 30 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಒಡವೆ ಹಾಗೂ 50 ಸಾವಿರ ರೂಪಾಯಿ ನಗದು ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಪ್ರದೀಪನ ಪೋಷಕರ ಷರತ್ತಿನಿಂದ ನಿರಾಸೆಗೊಂಡ ವಾಸಂತಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಈ ಸಂಗತಿಯನ್ನು ತಿಳಿದ ಪ್ರದೀಪ ಮೃತಳ ಕುತ್ತಿಗೆಗೆ ತಾಳಿ ಕಟ್ಟಿ ಆಕೆಯ ಸಹೋದರರು ಬರುವುದರೊಳಗೆ ನಾಪತ್ತೆಯಾಗಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments