Select Your Language

Notifications

webdunia
webdunia
webdunia
webdunia

ಮಲೇಷ್ಯಾ ವಿಮಾನದುರಂತದಿಂದ ಪಾರಾದ ಚುಕ್ಕಿ ನಂಜುಂಡಸ್ವಾಮಿ

ಮಲೇಷ್ಯಾ ವಿಮಾನದುರಂತದಿಂದ ಪಾರಾದ ಚುಕ್ಕಿ ನಂಜುಂಡಸ್ವಾಮಿ
, ಗುರುವಾರ, 13 ಮಾರ್ಚ್ 2014 (20:15 IST)
PR
PR
ಬೆಂಗಳೂರು: ಏಷ್ಯಾ ಪೆಸಿಫಿಕ್ ಸಮ್ಮೇಳನಕ್ಕೆ ತೆರಳಬೇಕಿದ್ದ ಚುಕ್ಕಿ ನಂಜುಂಡಸ್ವಾಮಿ ಮಲೇಷ್ಯಾ ವಿಮಾನ ದುರಂತದಿಂದ ಸ್ವಲ್ಪದರಲ್ಲಿ ಪಾರಾದ ಘಟನೆ ನಡೆದಿದೆ. ಮಲೇಷ್ಯಾ ವಿಮಾನದಲ್ಲಿ ಚುಕ್ಕಿ ನಂಜುಂಡಸ್ವಾಮಿ ಪ್ರಯಾಣಿಸಬೇಕಿತ್ತು. ಆದರೆ ಕೊನೆಗಳಿಗೆಯಲ್ಲಿ ಕಾರಣಾಂತರದಿಂದ ಪ್ರಯಾಣವನ್ನು ರದ್ದು ಮಾಡಿದ್ದರಿಂದ ಚುಕ್ಕಿ ನಂಜುಂಡಸ್ವಾಮಿ ಜೀವ ಉಳಿಯಿತು. ಚುಕ್ಕಿ ರೈತ ಸಂಘದ ಕಾರ್ಯಾಧ್ಯಕ್ಷೆಯಾಗಿದ್ದು, ಇಂತಹ ಘಟನೆಗಳು ಬದುಕನ್ನು ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.

ಮೀನುಗಾರರ ಸಂಘಟನೆಯ ಪರವಾಗಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ಚಂದ್ರಿಕಾ ಎಂಬವರು ಹೋಗಿದ್ದು, ಯಾವುದೇ ಮಾಹಿತಿ ಕೂಡ ಸಿಕ್ಕಿಲ್ಲ ಎಂದು ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ.

Share this Story:

Follow Webdunia kannada