Select Your Language

Notifications

webdunia
webdunia
webdunia
webdunia

ಮತಕ್ಕೋಸ್ಕರ ಮತಾಂತರಕ್ಕೂ ರೆಡಿ ಇದಾರೆ ಸಿಎಂ..!

ಮತಕ್ಕೋಸ್ಕರ ಮತಾಂತರಕ್ಕೂ ರೆಡಿ ಇದಾರೆ ಸಿಎಂ..!
ಬೆಂಗಳೂರು , ಶುಕ್ರವಾರ, 30 ಆಗಸ್ಟ್ 2013 (11:32 IST)
PR
PR
ಮುಖ್ಯಮಂತ್ರಿ ಸಿದ್ಧರಾಮಯ್ಯನವರು "ಮತಕ್ಕೋಸ್ಕರ ಮತಾಂತರವಾಗಲೂ ಸಿದ್ಧರಿದ್ದಾರೆ. ಮುಸ್ಲಿಂ ಜನಾಂಗದಿಂದಲೇ ಕಾಂಗ್ರೆಸ್‌ ಬದುಕಿದೆ. ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ ಕಾರಿದ್ದಾರೆ.

ಉಗ್ರ ಯಾಸಿನ್‌ ಭಟ್ಕಳ್‌ನನ್ನು ದೆಹಲಿ ಗುಪ್ತಚರ ಇಲಾಖೆ ಬಂಧಿಸಿತ್ತು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯನವರು ಉಗ್ರನಿಗೆ ಗೌರವ ಸೂಚಕ ಪದಗಳನ್ನು ಬಳಸಿದ್ದಾರೆ. ಯಾಸಿನ್ "ಅವರು" ಅರೆಸ್ಟ್ ಆಗಿದ್ದಾರೆ. "ಅವರು ಭಟ್ಕಳದವರು". "ಅವರ" ಮೇಲೆ ಕರ್ನಾಟಕದಲ್ಲಿ ಕೇಸ್‌ಗಳಿದ್ದವು. "ಅವರ" ವಿರುದ್ಧ ತನಿಖೆ ನಡೆಯಲಿದೆ ಎಂದು ಸಿಎಂ ಸಿದ್ಧರಾಮಯ್ಯನವರು ಹೇಳಿದ್ದರು.

ಉಗ್ರನಿಗೆ ಇಷ್ಟೋಂದು ಗೌರವ ನೀಡುತ್ತಿರುವ ಸಿಎಂ ಸಿದ್ಧರಮಯ್ಯನವರು ಮತಕ್ಕಾಗಿ ಏನು ಬೇಕಾದರೂ ಮಾಡುತಯ್ತಾರೆ. "ಮತಕಕ್‌ಆಗಿ ಮತಾಂತರಗೊಳ್ಳಲೂ ಸಿದ್ಧರಿದ್ದಾರೆ" ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ. ಇಂಥವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ಭವಿಷ್ಯ ನುಡಿದರು

Share this Story:

Follow Webdunia kannada