Webdunia - Bharat's app for daily news and videos

Install App

ಮಗುವಿಗೆ ಸಿಗರೇಟಿನಿಂದ ಸುಟ್ಟ ಆರೋಪ, ತಾಯಿ, ಪ್ರಿಯಕರನ ಬಂಧನ

Webdunia
ಬುಧವಾರ, 18 ಸೆಪ್ಟಂಬರ್ 2013 (14:31 IST)
PR
PR
ಮೈಸೂರು: ಮಗುವಿನ ಮೈಮೇಲೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ಮಾಡಿದ ಆರೋಪದ ಮೇಲೆ ಮಗುವಿನ ತಾಯಿ ಕವಿತಾ ಹಾಗೂ ಪ್ರಿಯಕರ ಹನುಮಂತುವನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿಗೆ ಸುಟ್ಟಿರುವುದಾಗಿ ಹನುಮಂತು ತಪ್ಪೊಪ್ಪಿಕೊಂಡಿದ್ದಾನೆ. . ಕವಿತಾಗೆ ಪುಟ್ಟಸ್ವಾಮಿ ಎಂಬವರ ಜತೆ ಐದು ವರ್ಷದ ಹಿಂದೆ ಮದುವೆಯಾಗಿತ್ತು. ಪುಟ್ಟಸ್ವಾಮಿ ಕವಿತಾಳನ್ನು ಬಿಟ್ಟು ಹೋದ ಬಳಿಕ ಕವಿತಾ ತಲಘಟ್ಟಪುರಕ್ಕೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಹನುಮಂತು ಎಂಬವನ ಸ್ನೇಹವನ್ನು ಕವಿತಾ ಮಾಡಿದ್ದಳು.

ಎರಡು ಮಕ್ಕಳಿರುವುದು ಅಡ್ಡಿಯಾಗುವುದರಿಂದ ಗಂಡು ಮಗುವನ್ನು ಒಬ್ಬರ ಬಳಿ ಮತ್ತು ಹೆಣ್ಣು ಮಗುವನ್ನು ಚಿಕ್ಕತಾಯಮ್ಮನ ಬಳಿ ಕೊಡುವುದಾಗಿ ಹನುಮಂತು ಹೇಳಿದ್ದ. ಮಗುವನ್ನು ಕೊಡುವುದಕ್ಕೆ ಹಿಂದಿನ ದಿನ ರಾತ್ರಿ ಮಗು ವಿಪರೀತ ಅಳುತ್ತಿರುವುದನ್ನು ಕಂಡು ಆಕ್ರೋಶ ಗೊಂಡ ಹನುಮಂತು ಸಿಗರೇಟಿನಿಂದ ಮಗುವಿನ ಮೈಮೇಲೆ, ಗುಪ್ತಾಂಗದ ಮೇಲೆ ಸುಟ್ಟಿದ್ದಾನೆಂದು ಆರೋಪಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments