Webdunia - Bharat's app for daily news and videos

Install App

ಮಗಳ ಪ್ರೇಮವಿವಾಹದಿಂದ ಮನನೊಂದು ವಿಷ ಕುಡಿದಿದ್ದ ತಂದೆಯ ಸಾವು

Webdunia
ಸೋಮವಾರ, 24 ಫೆಬ್ರವರಿ 2014 (11:30 IST)
PR
ಅಪ್ರಾಪ್ತ ವಯಸ್ಸಿನ ಪುತ್ರಿ ಪ್ರೇಮವಿವಾಹವಾಗಿದ್ದರಿಂದ ಮನನೊಂದು ವಿಷ ಸೇವಿಸಿದ್ದ ಕೋಲಾರದ ರಾಜಾರೆಡ್ಡಿ ಎಂಬಾತ ಇಂದು ಬೆಳಿಗ್ಗೆ ಅಸುನೀಗಿದ್ದು, ಆತನ ಪತ್ನಿ ಅಮೃತಾ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ.

ತಮ್ಮ ಮಗಳು ಪ್ರತಿಮಾ, ಶಿವಕುಮಾರ ಎಂಬಾತನನ್ನು ಮದುವೆಯಾದುದನ್ನು ತಿಳಿದು ರಾಜಾರೆಡ್ಡಿ ದಂಪತಿಗಳು ಫೆಬ್ರವರಿ 17 ರಂದು ಶಿವಕುಮಾರ ಮನೆಗೆ ಹೋಗಿ ಗಲಾಟೆ ಮಾಡಿ ಹಿಂತಿರುಗಿ ಬರುವಂತೆ ಮಗಳನ್ನು ಕೇಳಿಕೊಂಡಿದ್ದರು. ಆದರೆ ಆಕೆ ಪಾಲಕರ ಜತೆ ಹಿಂತಿರುಗಲು ನಿರಾಕರಿಸಿದ್ದಳು.

ಈ ವಿಷಯದಿಂದ ಮನನೊಂದ ದಂಪತಿಗಳು ಕೋಲಾರದ ಮಾಲೂರಿನ ಚೌಡಯ್ಯನಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ತಮ್ಮ ಸಾವಿಗೆ ಶಿವಕುಮಾರ್ ಮತ್ತು ಆತನ ಕುಟುಂಬದವರೇ ಕಾರಣ ಎಂದು ಮರಣಪತ್ರ ಬರೆದಿಟ್ಟು ಪೋಲಿಸ್ ಠಾಣೆಯ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಫಲಕಾರಿಯಾಗದೇ ರಾಜಾರೆಡ್ಡಿ ಇಂದು ಬೆಳಿಗ್ಗೆ ಸಾವಿಗೆ ಶರಣಾದರು. ಅವರ ಪತ್ನಿಯ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ ಮತ್ತು ಪ್ರತಿಮಾರನ್ನು ಪೋಲಿಸ್ ರು ಬಂಧಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments