Select Your Language

Notifications

webdunia
webdunia
webdunia
webdunia

ಬಿಬಿಎಂಪಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಅಶೋಕ್ ದುರ್ಮರಣ

ಬಿಬಿಎಂಪಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಅಶೋಕ್ ದುರ್ಮರಣ
, ಭಾನುವಾರ, 15 ಡಿಸೆಂಬರ್ 2013 (11:30 IST)
PR
PR
ಬೆಂಗಳೂರು: ಸುಂಕೇನಹಳ್ಳಿಯ ಸೀತಾರಾಮಯ್ಯ ರಸ್ತೆಯಲ್ಲಿ ಬಿಬಿಎಂಪಿ ತೋಡಿದ್ದ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿದ ಚಲನಚಿತ್ರ ಸಹನಟ ಅಶೋಕ್ ಎಂಬವರು ಮೃತಪಟ್ಟಿದ್ದಾರೆ. ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಪಾಲಿಕೆ ಗುಂಡಿ ತೋಡಿತ್ತು. ಇಷ್ಟು ದೊಡ್ಡ ಗುಂಡಿ ಅಗೆದಿದ್ದ ಪಾಲಿಕೆ ಗುಂಡಿಯ ಸುತ್ತ ಬ್ಯಾರಿಕೇಡ್ ಕೂಡ ಹಾಕಿರಲಿಲ್ಲವೆಂದು ಹೇಳಲಾಗುತ್ತಿದೆ. ಕಳೆದ 10 ದಿನಗಳಿಂದ ಗುಂಡಿಯನ್ನು ಮುಚ್ಚಿರಲಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಕತ್ತಲಲ್ಲಿ ಗುಂಡಿ ಕಾಣದೇ ಬೈಕ್ ಸವಾರ ಅಶೋಕ್ ಸಿದಾ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಕಿಮ್ಸ್ ಶವಾಗಾರದಲ್ಲಿ ಅಶೋಕ್ ಮೃತದೇಹವನ್ನು ಇಡಲಾಗಿದೆ. ಕನ್ನಡದ ಹಲವು ಸಿನೇಮಾಗಳಲ್ಲಿ ಅಶೋಕ್ ಸಹನಟರಾಗಿ ನಟಿಸಿದ್ದರು. ದುರಸ್ತಿ ಕಾಮಗಾರಿ ಹೆಸರಲ್ಲಿ 10 ದಿನಗಳ ಹಿಂದೆಯೇ ಗುಂಡಿ ತೋಡಲಾಗಿತ್ತು. ಸ್ಯಾನಿಟರಿ ಪೈಪ್ ಒಡೆದಿದ್ದರಿಂದ ನಮಗೆ ಮನವಿ ಮಾಡಿದ್ದರಿಂದ ನಾವು ಹೊಸ ಪೈಪ್ ಅಳವಡಿಸಿದ್ದೆವು. ಈ ಘಟನೆಗೆ ನಾವು ಹೊಣೆಯಲ್ಲ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ.

Share this Story:

Follow Webdunia kannada