Select Your Language

Notifications

webdunia
webdunia
webdunia
webdunia

ಬಿಜೆಪಿ ಸೇರಿದ ತಮ್ಮಣ್ಣ ಮದ್ದೂರಿನಿಂದ ಸ್ಫರ್ಧೆ?

ಬಿಜೆಪಿ ಸೇರಿದ ತಮ್ಮಣ್ಣ ಮದ್ದೂರಿನಿಂದ ಸ್ಫರ್ಧೆ?
ಬೆಂಗಳೂರು , ಗುರುವಾರ, 27 ನವೆಂಬರ್ 2008 (11:20 IST)
ಕಾಂಗ್ರೆಸ್ ನಾಯಕ ಡಿ.ಸಿ ತಮ್ಮಣ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿರುವ ಬಿಜೆಪಿ, ಮದ್ದೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ.

ಕಳೆದ ಬಾರಿ ಮದ್ದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದ ಮಾಜಿ ಸಂಸದ ಜಿ.ಮಾದೇಗೌಡರ ಪುತ್ರ ಮಧು ಮಾದೇಗೌಡರನ್ನು ಮೇಲ್ಮನೆಗೆ ಆರಿಸಿ ತರುವ ನಿರ್ಧಾರದ ಮೂಲಕ ಡಿ.ಸಿ. ತಮ್ಮಣ್ಣ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ.

ಈ ಕುರಿತು ತಮ್ಮಣ್ಣ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಅವರು ಅಧಿಕೃತವಾಗಿ ಬಿಜೆಪಿ ಸೇರುವುದು ಮಾತ್ರ ಬಾಕಿ ಇದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.



Share this Story:

Follow Webdunia kannada