Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯನಾಯಕರ ವಿರುದ್ಧ ಕಿಡಿಕಾರಿದ ಚಂದ್ರೇಗೌಡ

ಬಿಜೆಪಿ ರಾಜ್ಯನಾಯಕರ ವಿರುದ್ಧ ಕಿಡಿಕಾರಿದ ಚಂದ್ರೇಗೌಡ
, ಶುಕ್ರವಾರ, 7 ಮಾರ್ಚ್ 2014 (15:06 IST)
PR
PR
ಸಂಸದ ಡಿ.ಬಿ.ಚಂದ್ರೇಗೌಡ ಬಿಜೆಪಿ ಧೋರಣೆಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಬಿಜೆಪಿಯನ್ನು ತೊರೆಯುವ ಎಲ್ಲ ಲಕ್ಷಣವನ್ನು ತೋರಿಸಿದ್ದಾರೆ. ಪಕ್ಷದಲ್ಲಿ ಯಾರೊಬ್ಬರಿಗೂ ಸಂಸದೀಯ ನಡವಳಿಕೆ ಬಗ್ಗೆ ತಿಳಿದಿಲ್ಲ. ನಾನು ಸ್ವಾಭಿಮಾನಿ, ಯಾರೊಂದಿಗೂ ಟಿಕೆಟ್‌ಗೆ ಅಂಗಲಾಚಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ನಾನು ಸಹಿಸೋಲ್ಲ ಎಂದು ಸದಾನಂದ ಗೌಡರ ಭೇಟಿ ಬಳಿಕ ಚಂದ್ರೇಗೌಡರು ಈ ಮಾತನ್ನು ಹೇಳಿದ್ದಾರೆ. ರಾಜ್ಯನಾಯಕರು ಹಿರಿಯ ನಾಯಕರನ್ನು ಕಡೆಗಣಿಸುವ ಬಗ್ಗೆ ಚಂದ್ರೇಗೌಡ ಆಕ್ರೋಶಗೊಂಡಿದ್ದಾರೆ. ನಾನು ಅಭ್ಯರ್ಥಿಯಾದರೆ ಬೆಂಬಲಿಸಿ ಎಂದಿದ್ದೇನೆ.

ಡಿವಿಎಸ್‌ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ನನ್ನನ್ನು ಕಡೆಗಣಿಸುತ್ತಿದ್ದು, ಇದರಲ್ಲಿ ರಾಜ್ಯ ನಾಯಕರ ಕೈವಾಡವಿದೆ ಎಂದು ಅಶೋಕ್, ಜೋಷಿ ಮತ್ತು ಅನಂತಕುಮಾರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಯಡಿಯೂರಪ್ಪ ಅವರಿಗೆ ಕೂಡ ಪತ್ರಬರೆದು ಕೆಲವು ನಾಯಕರ ನಡವಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನನ್ನು ನೋವಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada