ಬಿಜೆಪಿ ಪಕ್ಷದಲ್ಲಿನ ಅಂತರಿಕ ವ್ಯವಹಾರಗಳ ಬಗ್ಗೆ ತುಂಬಾ ಬೇಸರವಾಗಿದ್ದು, ಬಿಜೆಪಿ ಪಕ್ಷಕ್ಕೆ ಗುಡ್ಬೈ ಹೇಳುತ್ತೇನೆ ಎಂದು ಹಿರಿಯ ಮುಖಂಡ ಡಿಬಿ.ಚಂದ್ರೇಗೌಡ ಹೇಳಿದ್ದಾರೆ
ಬಿಜೆಪಿ ಪಕ್ಷವನ್ನು ಚುನಾವಣೆಯ ನಂತರ ತೊರೆಯಬೇಕೋ ಅಥವಾ ಚುನಾವಣೆಗಿಂತ ಮೊದಲು ತೊರೆಯಬೇಕು ಎನ್ನುವ ಬಗ್ಗೆ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಿಗೆ ಗೌರವವಿಲ್ಲದಂತಾಗಿದ್ದು, ಮನಸ್ಸಿಗೆ ತುಂಬಾ ನೋವಾಗಿದೆ. ಇಂತಹ ಪಕ್ಷದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯನ್ನು ತೊರೆದು ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎನ್ನುವ ಬಗ್ಗೆ ಸದ್ಯಕ್ಕೆ ಚಿಂತಿಸುತ್ತಿಲ್ಲ. ಕಾಲವೇ ಉತ್ತರ ಹೇಳಲಿದೆ ಎಂದು ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಸ್ಪಷ್ಟಪಡಿಸಿದ್ದಾರೆ.