Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡುವುದು ಅನುಮಾನ: ಖರ್ಗೆ

ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡುವುದು ಅನುಮಾನ: ಖರ್ಗೆ
ಗುಲ್ಬರ್ಗಾ , ಶನಿವಾರ, 29 ಸೆಪ್ಟಂಬರ್ 2007 (17:00 IST)
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವವನ್ನು ಬಿಜೆಪಿಗೆ ಜೆಡಿಎಸ್ ಬಿಟ್ಟುಕೊಡುವುದು ಅನುಮಾನ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಅಂಗಪಕ್ಷಗಳ ನಡುವಣ ಜಗಳ ಇನ್ನೂ ಮುಗಿದಿಲ್ಲ, ಸಚಿವರೊಬ್ಬರು ಮುಖ್ಯಮಂತ್ರಿಯ ಮೇಲೆ ಕೊಲೆ ಆರೋಪ ಮಾಡಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.

ಇಂಥ ಪರಿಸ್ಥಿತಿಯಲ್ಲಿ ಅಧಿಕಾರ ಹಸ್ತಾಂತರ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ. ವಿಧಾನಸಭೆಯನ್ನು ರದ್ದುಪಡಿಸುವುದು ಅಥವಾ ಅಮಾನತಿನಲ್ಲಿಡುವುದು ಮುಂದಿರುವ ಆಯ್ಕೆಗಳು.

ಅಂಥ ಪರಿಸ್ಥಿತಿ ಎದುರಾದರೆ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ. ಸಮ್ಮಿಶ್ರ ಸರ್ಕಾರದ ಜಗಳದಿಂದ ರಾಜ್ಯದ ಆಡಳಿತ ಸ್ಥಗಿತಗೊಂಡಿದೆ ಎಂದ ಟೀಕಿಸಿದ್ದಾರೆ.

Share this Story:

Follow Webdunia kannada