Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಉತ್ತರ ಲೋಕಸಭೆ ಕ್ಷೇತ್ರ ಅಭ್ಯರ್ಥಿ ಆಯ್ಕೆ ಕಗ್ಗಂಟು

ಬಿಜೆಪಿಗೆ ಉತ್ತರ ಲೋಕಸಭೆ ಕ್ಷೇತ್ರ ಅಭ್ಯರ್ಥಿ ಆಯ್ಕೆ ಕಗ್ಗಂಟು
, ಮಂಗಳವಾರ, 4 ಮಾರ್ಚ್ 2014 (17:40 IST)
PR
PR
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಆರ್. ಅಶೋಕ್ ಅವರು ಉತ್ತರದಿಂದ ಸ್ಪರ್ಧಿಸುವುದಾದರೆ ತಾವು ಸಿದ್ದವಿರುವುದಾಗಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ನಾಳೆ ಅರುಣ್ ಜೇಟ್ಲಿ ರಾಜ್ಯಕ್ಕೆ ಆಗಮಿಸಿದ್ದು, ಈ ಕಗ್ಗಂಟು ಇತ್ಯರ್ಥವಾಗುತ್ತದೆಂದು ಹೇಳಲಾಗುತ್ತದೆ. ಪಕ್ಷದ ವತಿಯಿಂದ ಆರ್. ಅಶೋಕ್ ಅವರಿಗೆ ಸ್ಪರ್ಧಿಸುವಂತೆ ಹೇಳಿದ್ದರೂ, ಅಶೋಕ್ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದಾನಂದ ಗೌಡ ಅವರು ಕೂಡ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಅಶೋಕ್ ಸ್ಪರ್ಧೆ ಮಾಡದಿದ್ರೆ ನಾನು ಸ್ಪರ್ಧೆ ಮಾಡ್ತೀನಿ. ಅಶೋಕ್ ಸ್ಪರ್ಧಿಸುವುದಾದರೆ ತಾವು ಬೆಂಬಲಿಸುವುದಾಗಿ ಸದಾನಂದ ಗೌಡ ಹೇಳಿದರು.

webdunia
PR
PR
ಇದಕ್ಕೆ ಮುಂಚೆ ಸದಾನಂದ ಗೌಡರೇ ಉತ್ತರದ ಲೋಕಸಭೆ ಅಭ್ಯರ್ಥಿ ಎಂಬ ವದಂತಿಗಳು ಹರಡಿತ್ತು. ಈ ನಡುವೆ ಅನಂತಕುಮಾರ್ ಮಾತನಾಡುತ್ತಾ, ಅರುಣ್ ಜೇಟ್ಲಿ ಅವರು ಕರ್ನಾಟಕಕ್ಕೆ ಬರುತ್ತಿದ್ದು, ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿಡಬೇಕು ಎಂದು ತೀರ್ಮಾನಿರುವುದಾಗಿ ತಿಳಿಸಿದರು.

Share this Story:

Follow Webdunia kannada