Select Your Language

Notifications

webdunia
webdunia
webdunia
webdunia

ಬರಗಾಲ-ಏ.9ಕ್ಕೆ ಸರ್ಕಾರಕ್ಕೆ ವರದಿ ಕೊಡ್ತೇನೆ: ಯಡಿಯೂರಪ್ಪ

ಬರಗಾಲ-ಏ.9ಕ್ಕೆ ಸರ್ಕಾರಕ್ಕೆ ವರದಿ ಕೊಡ್ತೇನೆ: ಯಡಿಯೂರಪ್ಪ
ದೇವದುರ್ಗ , ಶುಕ್ರವಾರ, 6 ಏಪ್ರಿಲ್ 2012 (19:08 IST)
PR
ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಬರ ಪರಿಸ್ಥಿತಿ ಕುರಿತು ವರದಿ ಸಿದ್ದಪಡಿಸಿ, ಅದನ್ನು ಏಪ್ರಿಲ್ 9ರಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತಿಳಿಸಿದ್ದಾರೆ.

ಬರಪೀಡಿತ ಪ್ರದೇಶಗಳ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿಗಳು, ಕೆರೆ ಹೂಳೆತ್ತುವ ಕಾರ್ಯ ಶೀಘ್ರವೇ ಹೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಏತನ್ಮಧ್ಯೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಅಧಿವೇಶನ ಮುಗಿದ ಬಳಿಕ, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಅವರು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ತನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

Share this Story:

Follow Webdunia kannada