Select Your Language

Notifications

webdunia
webdunia
webdunia
webdunia

ಬಡತನದ ಬೇಗೆಯಿಂದ ನೊಂದ ಮಹಿಳೆ ಸೇರಿ ಮೂವರ ಆತ್ಮಹತ್ಯೆ

ಬಡತನದ ಬೇಗೆಯಿಂದ ನೊಂದ ಮಹಿಳೆ ಸೇರಿ ಮೂವರ ಆತ್ಮಹತ್ಯೆ
, ಶುಕ್ರವಾರ, 29 ನವೆಂಬರ್ 2013 (20:27 IST)
PR
PR
ಮಂಡ್ಯ: ಇದು ಬಡತನದ ಬೇಗೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ದುರಂತ ಕಥೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪುಷ್ಪಲತಾಳ ಗಂಡ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಪುಷ್ಪಲತಾಳಿಗೆ ಜೀವನ ಕಷ್ಟವಾಗಿ ಕಂಡಿತು. ತನ್ನ ಇಬ್ಬರು ಮಕ್ಕಳನ್ನು ಸಾಕುವುದು ಅಸಾಧ್ಯವಾಗಿ ಕಂಡಿತು. ಮಾನಸಿಕ ವಿಕಲ್ಪ ಅಣ್ಣನನ್ನು ಕೂಡ ಪುಷ್ಪಲತಾಳೇ ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊತ್ತಿದ್ದಳು. ಬಡತನದ ಘೋರ ಶಾಪದಿಂದ ತನ್ನ ಇಬ್ಬರು ಮಕ್ಕಳು ಹಾಗೂ ಅಣ್ಣನ ಜತೆ ಪುಷ್ಪಲತಾ ನೇಣು ಹಾಕಿಕೊಂಡರು.

ಆದರೆ ಅದೃಷ್ಟವಶಾತ್ ಸಂಗೀತಾ ಎಂಬ ಪುತ್ರಿ ಈ ದುರಂತದಿಂದ ಪಾರಾಗಿದ್ದಾಳೆ. ನೇಣಿನ ಕುಣಿಕೆಯಿಂದ ಬಿಡಿಸಿಕೊಂಡು ಹೊರಬಂದು ಜೋರಾಗಿ ಕೂಗಿದ್ದಾಳೆ. ನೆರೆಹೊರೆಯವರು ಧಾವಿಸಿ ಅವಳನ್ನು ರಕ್ಷಿಸಿದ್ದಾರೆ.

Share this Story:

Follow Webdunia kannada