Webdunia - Bharat's app for daily news and videos

Install App

ಬಟ್ಟೆ ಒಣಗಿಸುವಲ್ಲಿ ಕಿರಿಕ್ : ಪಕ್ಕದ ಮನೆಯಾಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ

Webdunia
ಶುಕ್ರವಾರ, 25 ಅಕ್ಟೋಬರ್ 2013 (13:02 IST)
PR
PR
ಇದೊಂದು ಸಿಲ್ಲಿ ಕಾರಣಕ್ಕಾಗಿ ನಡೆದ ಘನ ಘೋರ ಘಟನೆ. ಪಕ್ಕದ ಮನೆಯಾಕೆ ಜಗಳವಾಡಿದ್ದಾಳೆ ಎಂದು ಕೋಪಗೊಂಡ ಮತ್ತೊಂದು ಮನೆಯ ಹೆಂಗಸು, ತನ್ನ ಮನೆಯಲ್ಲಿದ್ದ ಸೀಮೆ ಎಣ್ಣೆಯ ಕ್ಯಾನ್ ತೆಗೆದುಕೊಂಡು ಪಕ್ಕದ ಮನೆಯ ಹೆಂಗಸಿನ ಮೇಲೆ ಸುರಿದು ಬೆಂಕಿ ಹಚ್ಚಿದ ಬರ್ಬರ ಘಟನೆ ನೆನ್ನೆ ಬೆಂಗಳೂರಿನಲ್ಲಿ ನಡೆದಿದೆ.

ರವಿಕಲ ಎಂಬಾಕೆ ಪಕ್ಕದ ಬೆಂಕಿಯಲ್ಲಿ ಬೆಂದ ಬಾಲೆ. ರವಿಕಲ ಮತ್ತು ಮುನಿಯಮ್ಮ ನಡುವೆ ಆಗಾಗ ಚಿಕ್ಕ ಚಿಕ್ಕ ವಿಷಯವಾಗಿ ಜಗಳಗಳು ನಡೆಯುತ್ತಿದ್ದವು. ನೆನ್ನೆ ಕೂಡ ಬಟ್ಟೆ ಒಣಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಮುನಿಯಮ್ಮ ತನ್ನ ಮನೆಯಲ್ಲಿದ್ದ ಸೀಮೆ ಎಣ್ಣೆ ಕ್ಯಾನ್ ತೆಗೆದುಕೊಂಡು ರವಿಕಲ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಬೆಂಕಿಯ ಕೆನ್ನಾಲಿಗೆಯ ತೀವ್ರತೆಗೆ ರವಿಕಲ ಸಂಪೂರ್ಣವಾಗಿ ಬಂದು ಹೋಗಿದ್ದಳು. ಪರಿಣಾಮವಾಗಿ ರವಿಕಲ ಸಾವಿಗೀಡಾಗಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ಈ ಬಗ್ಗೆ ರವಿಕಲ ಪತಿ ನರಸಿಂಹ ಪೋಲೀಸರಿಗೆ ದೂರು ನೀಡಿದ್ದಾರೆ. ಮುನಿಯಮ್ಮನೇ ತನ್ನ ಪತ್ನಿ ರವಿಕಲ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ದೂರು ದಾಖಲಿಸಿಕೊಂಡ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments