Select Your Language

Notifications

webdunia
webdunia
webdunia
webdunia

ಬಜೆಟ್‌ನಲ್ಲಿ ಯಾವ ವರ್ಗಕ್ಕೂ ಅನ್ಯಾಯವಾಗಿಲ್ಲ: ಪರಮೇಶ್ವರ್ ಹೇಳಿಕೆಗೆ ಸಿಎಂ ತಿರುಗೇಟು

ಬಜೆಟ್‌ನಲ್ಲಿ ಯಾವ ವರ್ಗಕ್ಕೂ ಅನ್ಯಾಯವಾಗಿಲ್ಲ: ಪರಮೇಶ್ವರ್ ಹೇಳಿಕೆಗೆ ಸಿಎಂ ತಿರುಗೇಟು
, ಮಂಗಳವಾರ, 4 ಮಾರ್ಚ್ 2014 (13:19 IST)
PR
PR
ಬೆಂಗಳೂರು: ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿದ್ದೇವೆ. ಎಸ್.ಸಿ, ಎಸ್‌ಟಿಗೆ ಶೇ. 24ರಷ್ಟು ಅನುದಾನ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪರಮೇಶ್ವರ್ ಮೊನ್ನೆ ಸಭೆಯೊಂದರಲ್ಲಿ ಮಾತನಾಡುತ್ತಾ, 'ನಾವು ಯಾರಿಗೆ ಸ್ವಾಮಿ ಮೊದಲು ಸಹಾಯ ಮಾಡಬೇಕು, ಯಾವ ಸಮಾಜದಲ್ಲಿ ಶೋಷಿತ ವರ್ಗದವನು ಇದ್ದಾನೆ, ಅವನಿಗೆ ಸಹಾಯ ಮಾಡಬೇಕು, ಯಾರು ಬಹುಸಂಖ್ಯಾತರಿದ್ದಾರೆ ಅವರಿಗೆ ಲಕ್ಷಾಂತರ ರೂ. ಕೊಡುವ ಅವಶ್ಯಕತೆ ಇಲ್ಲ' ಎಂದು ಹೇಳಿದ್ದರು.

ಬಜೆಟ್‌ನಲ್ಲಿ ಯಾವ ವರ್ಗಕ್ಕೂ ಅನ್ಯಾಯವಾಗಿಲ್ಲ. ಇದೆಲ್ಲಾ ಸುಳ್ಳು ಎಂದು ಸಿಎಂ ಸ್ಪಷ್ಟೀಕರಣ ಮಾಡಿದರು. ಎಲ್ಲ ವರ್ಗದವರಿಗೂ ನಾವು ಜನಸಂಖ್ಯೆ ಆಧರಿಸಿ ಅನುದಾನವನ್ನು ನೀಡಿದ್ದೇವೆ ಎಂದು ಸಿಎಂ ಹೇಳಿದರು.

Share this Story:

Follow Webdunia kannada