' ಫೋನ್ ಮಾಡಿ ವೋಟ್ ಮಾಡಿ' ಸಮಯ ಟಿವಿ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿದ್ದು, 47,000 ಜನರು ಬಿಜೆಪಿ ಪರ ವೋಟ್ ಮಾಡಿದ್ದು, ಯಡಿಯೂರಪ್ಪ ಗೆಲುವು ಗಳಿಸುವ ಲಕ್ಷಣಗಳು ಗೋಚರಿಸಿವೆ. 41,587 ಜನರು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನಮ್ಮ ಆಯ್ಕೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪರ 12, 634 ಜನರು ವೋಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಮಂಜುನಾಥ್ ಭಂಡಾರಿಗೆ ಟಿಕೆಟ್ ನೀಡಲಾಗಿತ್ತು.
ಗೀತಾ ಶಿವರಾಜ್ ಕುಮಾರ್ ಯಡಿಯೂರಪ್ಪ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿರುವುದು ವೋಟಿಂಗ್ನಲ್ಲಿ ಕಂಡುಬಂದಿದೆ. ಇದರಿಂದ ಶಿವಮೊಗ್ಗದಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದು ಸ್ಪಷ್ಟವಾಗಿದೆ. ಕುಮಾರ್ ಬಂಗಾರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರಿಗೆ ಅನುಕಂಪದ ಮತಗಳು ಬಿದ್ದು, ಜೆಡಿಎಸ್ಗೆ ಬೀಳುವ ಮತಗಳು ಹಂಚಿಹೋಗಬಹುದೆಂದು ಭಾವಿಸಲಾಗಿದೆ.