Select Your Language

Notifications

webdunia
webdunia
webdunia
webdunia

ಪ್ರತಿಪಕ್ಷಗಳನ್ನು ಟ್ಯಾಕಲ್ ಮಾಡುವುದೇ ಸಿಎಂಗೆ ಸಮಸ್ಯೆ: ತುರ್ತು ಸಭೆ

ಪ್ರತಿಪಕ್ಷಗಳನ್ನು ಟ್ಯಾಕಲ್ ಮಾಡುವುದೇ ಸಿಎಂಗೆ ಸಮಸ್ಯೆ: ತುರ್ತು ಸಭೆ
, ಗುರುವಾರ, 28 ನವೆಂಬರ್ 2013 (15:33 IST)
PR
PR
ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ಹಾಗೂ ಕಬ್ಬು ಬೆಳೆಗಾರ ವಿಠಲ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸದನ ಸರಿಯಾಗಿ ನಡೆಯಲು ಬಿಜೆಪಿ ಬಿಡುತ್ತಿಲ್ಲವಾದ್ದರಿಂದ ಅದನ್ನು ಟ್ಯಾಕಲ್ ಮಾಡುವುದು ಹೇಗೆಂದು ಸಿಎಂ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದಾರೆ. ಸರ್ಕಾರದ ಎಲ್ಲ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಆತ್ಮಹತ್ಯೆ ಆಗದಂತೆ ಮುಂದೆ ನೋಡಿಕೊಳ್ಳಬೇಕು, 1000 ರೂ. ಬೆಂಬಲ ಬೆಲೆ ನೀಡಬೇಕು, ರೈತರಿಗೆ ಕಾರ್ಖಾನೆಗಳು ನೀಡುವ ಬೆಲೆಯ ಬಗ್ಗೆ ಯಾವ ಖಾತರಿ ಕೊಡುತ್ತೀರಿ ಎಂದು ಬಿಜೆಪಿ ಒತ್ತಾಯಿಸಿದೆ.

ಈ ಎಲ್ಲ ವಿಚಾರಗಳ ಬಗ್ಗೆ ಇದೀಗ ತುರ್ತು ಸಭೆಯಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಬೆಳಗಾವಿ ಅಧಿವೇಶನ ನಡೆದಾಗಿನಿಂದ ಒಂದಿಲ್ಲೊಂದು ಕಾರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಗದ್ದಲ, ಗೌಜನ್ನು ನಿಭಾಯಿಸುವುದು ಹೇಗೆನ್ನುವುದು ಸಿದ್ದರಾಮಯ್ಯನವರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಬಿಡುತ್ತಿರುವ ಅಸ್ತ್ರಗಳನ್ನು ಒಂದೊಂದಾಗಿ ತಡೆದು ಪ್ರತ್ಯಸ್ತ್ರ ಪ್ರಯೋಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆಂದು ತಿಳಿದುಬಂದಿದೆ.

Share this Story:

Follow Webdunia kannada