Select Your Language

Notifications

webdunia
webdunia
webdunia
webdunia

ಪ್ರಚೋದನಾಕಾರಿ ಭಾಷಣ ಮಾಡಿದ ಪ್ರತಾಪ್ ಸಿಂಹ ವಿರುದ್ಧ ದೂರು

ಪ್ರಚೋದನಾಕಾರಿ ಭಾಷಣ ಮಾಡಿದ ಪ್ರತಾಪ್ ಸಿಂಹ ವಿರುದ್ಧ ದೂರು
, ಶುಕ್ರವಾರ, 21 ಮಾರ್ಚ್ 2014 (17:30 IST)
PR
PR
ಬೆಂಗಳೂರು: ನಮ್ಮಇಬ್ಬರು ಸೈನಿಕರ ತಲೆ ಕಡಿದರೆ ಪಾಕಿಸ್ತಾನಿಯರ ನಾಲ್ಕು ತಲೆ ಕಡಿಯಯುವುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಸೂಚಿಸಬಹುದಿತ್ತು ಎಂದು ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ದ ಪ್ರಚೋದನಾ ಕಾರಿ ಭಾಷಣ ಮಾಡಿದ ಆರೋಪದ ಮೇಲೆ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ್ದರು.

ಪಾಕಿಸ್ತಾನ ಭಾರತದ ಇಬ್ಬರು ಸೈನಿಕರ ತಲೆಯನ್ನು ಚೆಂಡಾಡಿದರು, ಪಾಕ್ ನಾಲ್ಕು ಸೈನಿಕರ ಚೆಂಡಾಡಿ ಎಂದು ಪ್ರಧಾನಿ ಸೈನಿಕರಿಗೆ ಗೌಪ್ಯ ಸಂದೇಶ ನೀಡಬೇಕಿತ್ತು ಎಂದು ಪ್ರತಾಪ್ ಸಿಂಹ ಹೇಳಿದ್ದರು. ಎನ್. ಲಕ್ಷ್ಮಣ್ ಅವರು ಈ ಕುರಿತು ಪ್ರತಾಪ್ ಸಿಂಹ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಬಿಜೆಪಿ ಸಂಸ್ಕೃತಿ ತಲೆ ಕಡಿಯುವುದಾಗಿದೆ ಎಂದು ಈ ಕುರಿತು ಮೈಸೂರು ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada