Select Your Language

Notifications

webdunia
webdunia
webdunia
webdunia

ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂಗೆ ರಾಮದಾಸ್ ಪತ್ರ

ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂಗೆ ರಾಮದಾಸ್ ಪತ್ರ
, ಭಾನುವಾರ, 16 ಫೆಬ್ರವರಿ 2014 (11:54 IST)
PR
PR
ಬೆಂಗಳೂರು: ಮಾಜಿ ಸಚಿವ ರಾಮದಾಸ್ ಫೆಬ್ರವರಿ 14ರಂದು ಸಿಎಂ ಮಾಜಿ ಸಚಿವ ರಾಮದಾಸ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ. ಬ್ಲಾಕ್ ಮೇಲ್ ಉದ್ದೇಶದಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದಾನೆ. ದೂರಿನಲ್ಲಿ ಘಟನೆ ಸಂಪೂರ್ಣ ವಿವರ ನೀಡಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಪತ್ರದಲ್ಲಿ ಕೋರಿದ್ದೇನೆ ಎಂದು ರಾಮದಾಸ್ ಹೇಳಿಕೆ ನೀಡಿದ್ದಾರೆ.

ರಾಮದಾಸ್ ವಿರುದ್ಧ ಅವರ ಪ್ರಿಯತಮೆ ಎಂದು ಹೇಳಲಾದ ಪ್ರೇಮಕುಮಾರಿ ಪತ್ರಿಕಾಗೋಷ್ಠಿ ಕರೆದು ರಾಮದಾಸ್ ತಮ್ಮನ್ನು ಪ್ರೀತಿಸಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಇದರಿಂದ ತೀವ್ರವಾಗಿ ನೊಂದ ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.

Share this Story:

Follow Webdunia kannada