Select Your Language

Notifications

webdunia
webdunia
webdunia
webdunia

ಪರದೆ ಮೇಲೆ ಕೆಂಪೇಗೌಡರ ಇತಿಹಾಸ: ಸ್ಟೇಜ್‌ ಮೇಲೆ ಸಿಎಂ ಗಡದ್ ನಿದ್ರೆ

ಪರದೆ ಮೇಲೆ ಕೆಂಪೇಗೌಡರ ಇತಿಹಾಸ: ಸ್ಟೇಜ್‌ ಮೇಲೆ ಸಿಎಂ ಗಡದ್ ನಿದ್ರೆ
, ಶನಿವಾರ, 14 ಡಿಸೆಂಬರ್ 2013 (13:32 IST)
PR
PR
ಬೆಂಗಳೂರು: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. 1500 ಕೋಟಿ ರೂ. ವೆಚ್ಚದ ನೂತನ ಟರ್ಮಿನಲ್‌ ಉದ್ಘಾಟನೆಯನ್ನು ಕೂಡ ನೆರವೇರಿಸಲಾಯಿತು. ಕೆಂಪೇಗೌಡ ಹೆಸರಿಡಲು ಕೇಂದ್ರ ಸಚಿವ ಸಂಪುಟ ಈಗಾಗಲೇ ಸಮ್ಮತಿ ನೀಡಿತ್ತು. ಜ್ಯೋತಿ ಬೆಳಗುವುದರ ಮೂಲಕ ಮರುನಾಮಕರಣ ಮಾಡಲಾಯಿತು.

ಮರುನಾಮಕರಣ ಕಾರ್ಯಕ್ರಮದಲ್ಲಿ 15 ನಿಮಿಷ ನಿದ್ರೆಗೆ ಸಿಎಂ ಜಾರಿದ ಘಟನೆಯೂ ನಡೆದಿದೆ. ಪರದೆಯಲ್ಲಿ ಕೆಂಪೇಗೌಡರ ಇತಿಹಾಸ ರಾರಾಜಿಸುತ್ತಿದ್ದ ಸಂದರ್ಭದಲ್ಲಿ ಸ್ಟೇಜ್ ಮೇಲೆ ಸಿಎಂ ಗಡದ್ ನಿದ್ದೆಗೆ ಶರಣಾಗಿದ್ದರು. ಕೇಂದ್ರ ವಿಮಾನಯಾನ ಸಚಿವ ಅಜಿತ್ ಸಿಂಗ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.ಕೇಂದ್ರ ಸಚಿವ ಮೊಯ್ಲಿ, ರೆಹಮಾನ್ ಖಾನ್ ಭಾಗಿಯಾಗಿದ್ದರು.

Share this Story:

Follow Webdunia kannada