Select Your Language

Notifications

webdunia
webdunia
webdunia
webdunia

ಪಬ್ ದಾಳಿ: ಶ್ರೀರಾಮಸೇನೆಯ 27ಮಂದಿಗೆ ಜಾಮೀನು

ಪಬ್ ದಾಳಿ: ಶ್ರೀರಾಮಸೇನೆಯ 27ಮಂದಿಗೆ ಜಾಮೀನು
ಮಂಗಳೂರು , ಶನಿವಾರ, 31 ಜನವರಿ 2009 (18:36 IST)
ನಗರದ ಎಮ್ನೇಶಿಯ ಪಬ್ ದಾಳಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶ್ರೀರಾಮಸೇನೆಯ ಎಲ್ಲಾ 27ಮಂದಿಗೆ ಇಲ್ಲಿನ 3ನೇ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ ಷರತ್ತು ಬದ್ದ ಜಾಮೀನು ನೀಡಿದೆ.

ಕಳೆದ ವಾರ ಬಲ್ಮಠ ಸಮೀಪದ ಎಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿ, ಯುವತಿಯರ ಮೇಲೆ ನಡೆಸಿದ ಹಲ್ಲೆ ರಾಷ್ಟ್ರಮಟ್ಟದಲ್ಲಿ ತೀವ್ರ ವಿವಾದ ಹುಟ್ಟುಹಾಕಿತ್ತು.

ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ರಾಜ್ಯ ಸರ್ಕಾರ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು 27ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಸೇನೆಯ 27ಮಂದಿಗೆ ಷರತ್ತು ಬದ್ದ ಜಾಮೀನು ನೀಡಿದೆ.

Share this Story:

Follow Webdunia kannada