Select Your Language

Notifications

webdunia
webdunia
webdunia
webdunia

ನ.19ಕ್ಕೆ ನೂತನ ಪಕ್ಷ ಘೋಷಣೆ: ಬಿ.ಎಸ್.ಯಡಿಯೂರಪ್ಪ

ನ.19ಕ್ಕೆ ನೂತನ ಪಕ್ಷ ಘೋಷಣೆ: ಬಿ.ಎಸ್.ಯಡಿಯೂರಪ್ಪ
ಶಿಕಾರಿಪುರ , ಶುಕ್ರವಾರ, 5 ಅಕ್ಟೋಬರ್ 2012 (10:59 IST)
PR
ತಾಲ್ಲೂಕಿನ ಆಯ್ದ ಮುಖಂಡರ ಜತೆ ಬುಧವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಸಕ್ತ ರಾಜಕಾರಣ ಕುರಿತು ಮುಖಂಡರ ಜತೆ ಚರ್ಚಿಸಿದ್ದು, ಇದೇ ನವೆಂಬರ್ 19ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾರಂಭದ ನಂತರ ಹೊಸಪಕ್ಷ ಘೋಷಣೆ ಮಾಡುವ ಕುರಿತು ಬಿಎಸ್‌ವೈ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹೊಸ ಪಕ್ಷ ರಚನೆ ಕುರಿತು ಹಿರಿಯ ಮುಖಂಡರಿಂದ ಅಭಿಪ್ರಾಯ, ಸಲಹೆಯನ್ನೂ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಜತೆ ಸಹಕರಿಸಿ: ಬಿಎಸ್‌ವೈ
ತಾಲ್ಲೂಕಿನ ಅಮಟೆಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ತಾಲ್ಲೂಕಿನ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ಪ್ರಸ್ತುತ ರಾಜಕಾರಣದಲ್ಲಿ ಯಾವುದೇ ಕ್ಷಣದಲ್ಲೂ ಏರುಪೇರು ಸಂಭವಿಸಿದರೂ ಹಿಂದಿನ ವರ್ಷಗಳಲ್ಲಿ ನೀವು ನನ್ನ ಜತೆ ಸಹಕರಿಸಿದಂತೆ, ಮುಂದಿನ ದಿನಗಳಲ್ಲೂ ನನ್ನ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಸೇರಿದಂತೆ ಇತರೆ ನಾಯಕರು ಈಗ ಬಗರ್‌ಹುಕುಂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಇವರೆಲ್ಲಾ ಏಕೆ ಹೋರಾಟ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

Share this Story:

Follow Webdunia kannada