Webdunia - Bharat's app for daily news and videos

Install App

ನಿವೇಶನ ಖರೀದಿಗೆ ಎನ್‌ಆರ್‌ಐ ಕಳಿಸಿದ್ದ 2 ಕೋಟಿ ರೂ.ಸ್ನೇಹಿತನಿಂದಲೇ ಗುಳುಂ

Webdunia
ಸೋಮವಾರ, 13 ಜನವರಿ 2014 (11:23 IST)
PR
PR
ಬೆಂಗಳೂರು: ಬೆಂಗಳೂರಿನಲ್ಲಿ ಜಾಗ ಕೊಂಡು ಮನೆ ಕಟ್ಟಲು ಆಸೆ ಪಟ್ಟಿದ್ದ ಅನಿವಾಸಿ ಭಾರತೀಯ ಮ್ಯಾಥ್ಯೂ ಎಂಬವರಿಗೆ ಗೆಳೆಯ ಹರೀಂದ್ರನ್ ಎಂಬವರು 2ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆಂದು ಮ್ಯಾಥ್ಯೂ ದೂರು ನೀಡಿದ್ದಾರೆ. ಕೇರಳ ಮೂಲದ ಮ್ಯಾಥ್ಯೂ ಕುರಿಯನ್ ಇಂಗ್ಲೆಂಡ್ ನಿವಾಸಿ. ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಸ್ನೇಹಿತನಿಗೆ 2 ಕೋಟಿಗೂ ಹೆಚ್ಚು ಹಣವನ್ನು ಮ್ಯಾಥ್ಯೂ ನೀಡಿದ್ದರು. ಬೆಂಗಳೂರಿನ ನಾಗಪ್ಪರೆಡ್ಡಿ ಲೇಔಟ್‌ನಲ್ಲಿ ನಿವೇಶನ ಖರೀದಿಸಲು ತನ್ನ ರಿಯಲ್ ಎಸ್ಟೇಟ್ ಬಿಸಿನೆಸ್‌ನಲ್ಲಿದ್ದ ತನ್ನ ಆತ್ಮೀಯ ಗೆಳೆಯನನ್ನು ನಂಬಿ ಹಣ ಕಳಿಸಿದ್ದರು.

ಆದರೆ ಹರೀಂದ್ರನ್ ಹಣವನ್ನು ನುಂಗಿಹಾಕಿದ್ದಾನೆಂದು ಅವರು ಆರೋಪಿಸಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ನಿವೇಶನ ಕೊಡಿಸಿ ಮನೆ ಕಟ್ಟಿಸಿಕೊಡುವುದಾಗಿ ಹರೀಂದ್ರನ್ ಆಶ್ವಾಸನೆ ನೀಡಿದ್ದ. ಕೇರಳ ಮೂಲದವರಾದ ಮ್ಯಾಥ್ಯೂ ಬಾಲ್ಯಸ್ನೇಹಿತ ಎಂಬ ಕಾರಣಕ್ಕಾಗಿ ಹರೀಂದ್ರನ್ ಮೇಲೆ ನಂಬಿಕೆ ಇರಿಸಿದ್ದರು. ಆದರೆ ನಿವೇಶನಕ್ಕೆ ನೀಡಿದ್ದ ಹಣವನ್ನು ಹರೀಂದ್ರನ್ ದುರುಪಯೋಗ ಮಾಡಿದ್ದು, ತನಗೆ ನ್ಯಾಯ ಒದಗಿಸುವಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮ್ಯಾಥ್ಯೂ ನಿರ್ಧರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments