Select Your Language

Notifications

webdunia
webdunia
webdunia
webdunia

ನಿವೇಶನ ಖರೀದಿಗೆ ಎನ್‌ಆರ್‌ಐ ಕಳಿಸಿದ್ದ 2 ಕೋಟಿ ರೂ.ಸ್ನೇಹಿತನಿಂದಲೇ ಗುಳುಂ

ನಿವೇಶನ ಖರೀದಿಗೆ ಎನ್‌ಆರ್‌ಐ ಕಳಿಸಿದ್ದ 2 ಕೋಟಿ ರೂ.ಸ್ನೇಹಿತನಿಂದಲೇ ಗುಳುಂ
, ಸೋಮವಾರ, 13 ಜನವರಿ 2014 (11:23 IST)
PR
PR
ಬೆಂಗಳೂರು: ಬೆಂಗಳೂರಿನಲ್ಲಿ ಜಾಗ ಕೊಂಡು ಮನೆ ಕಟ್ಟಲು ಆಸೆ ಪಟ್ಟಿದ್ದ ಅನಿವಾಸಿ ಭಾರತೀಯ ಮ್ಯಾಥ್ಯೂ ಎಂಬವರಿಗೆ ಗೆಳೆಯ ಹರೀಂದ್ರನ್ ಎಂಬವರು 2ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆಂದು ಮ್ಯಾಥ್ಯೂ ದೂರು ನೀಡಿದ್ದಾರೆ. ಕೇರಳ ಮೂಲದ ಮ್ಯಾಥ್ಯೂ ಕುರಿಯನ್ ಇಂಗ್ಲೆಂಡ್ ನಿವಾಸಿ. ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಸ್ನೇಹಿತನಿಗೆ 2 ಕೋಟಿಗೂ ಹೆಚ್ಚು ಹಣವನ್ನು ಮ್ಯಾಥ್ಯೂ ನೀಡಿದ್ದರು. ಬೆಂಗಳೂರಿನ ನಾಗಪ್ಪರೆಡ್ಡಿ ಲೇಔಟ್‌ನಲ್ಲಿ ನಿವೇಶನ ಖರೀದಿಸಲು ತನ್ನ ರಿಯಲ್ ಎಸ್ಟೇಟ್ ಬಿಸಿನೆಸ್‌ನಲ್ಲಿದ್ದ ತನ್ನ ಆತ್ಮೀಯ ಗೆಳೆಯನನ್ನು ನಂಬಿ ಹಣ ಕಳಿಸಿದ್ದರು.

ಆದರೆ ಹರೀಂದ್ರನ್ ಹಣವನ್ನು ನುಂಗಿಹಾಕಿದ್ದಾನೆಂದು ಅವರು ಆರೋಪಿಸಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ನಿವೇಶನ ಕೊಡಿಸಿ ಮನೆ ಕಟ್ಟಿಸಿಕೊಡುವುದಾಗಿ ಹರೀಂದ್ರನ್ ಆಶ್ವಾಸನೆ ನೀಡಿದ್ದ. ಕೇರಳ ಮೂಲದವರಾದ ಮ್ಯಾಥ್ಯೂ ಬಾಲ್ಯಸ್ನೇಹಿತ ಎಂಬ ಕಾರಣಕ್ಕಾಗಿ ಹರೀಂದ್ರನ್ ಮೇಲೆ ನಂಬಿಕೆ ಇರಿಸಿದ್ದರು. ಆದರೆ ನಿವೇಶನಕ್ಕೆ ನೀಡಿದ್ದ ಹಣವನ್ನು ಹರೀಂದ್ರನ್ ದುರುಪಯೋಗ ಮಾಡಿದ್ದು, ತನಗೆ ನ್ಯಾಯ ಒದಗಿಸುವಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮ್ಯಾಥ್ಯೂ ನಿರ್ಧರಿಸಿದ್ದಾರೆ.

Share this Story:

Follow Webdunia kannada