Select Your Language

Notifications

webdunia
webdunia
webdunia
webdunia

ನಿಗೂಢ ಸಾವುಗಳು : ಆಸ್ಪತ್ರೆಯಿಂದ ಬಂದವನು ಹೆಂಡತಿ ಮಕ್ಕಳನ್ನು ಕೊಂದನು.

ನಿಗೂಢ ಸಾವುಗಳು : ಆಸ್ಪತ್ರೆಯಿಂದ ಬಂದವನು ಹೆಂಡತಿ ಮಕ್ಕಳನ್ನು ಕೊಂದನು.
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2013 (14:03 IST)
PR
PR
ಹುಷಾರಿಲ್ಲ ಎಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಯೊಬ್ಬ ಮನೆಗೆ ವಾಪಸ್‌ ಬಂದ ನಂತರ ತನ್ನ ಹೆಂಡತಿ, ಮಕ್ಕಳಿಗೆ ಬಲವಂತವಾಗಿ ವಿಷ ಹಾಕಿ ಕೊಲೆ ಮಾಡಿದ ವಿಕೃತ ಘಟನೆ ಬೆಂಗಳೂರಿನ ಹೊಸಕೋಟೆಯ ಸಮೀಪದಲ್ಲಿ ನಡೆದಿದೆ. ವಿಷ ಕುಡಿಯಲು ನಿರಾಕರಿಸಿದಾಗ ಮಗನ ಕತ್ತನ್ನು ಸೀಳಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಇದಾದ ನಂತರ ಅವನೂ ಕೂಡ ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.

ಮೂಲತಃ ನೇಪಾಳ ಮೂಲದವರಾದ ಶಿವರಾಜ್‌ ಜೋಷಿ ಎಂಬ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ. ಕಳೆದ ಏಳು ವರ್ಷಗಳಿಂದ ಇಲ್ಲಿನ ಹೊಸಕೋಟೆಯ ಕೈಗಾರಿಕಾ ಪ್ರದೇಶವಾಗಿರುವ ಪಿಳ್ಳಂಗುಪ್ಪೆಯಲ್ಲಿ ಎಲ್ಲರೂ ವಾಸಿಸುತ್ತಿದ್ದರು.

ಶಿವರಾಜ್‌ಗೆ ಉಷಾ ಎಂಬ ಪತ್ನಿ ಇದ್ದಳು. ನಿಖಿಲ್ ಮತ್ತು ನೀಲಂ ಎಂಬ ಇಬ್ಬರು ಮಕ್ಕಳಿದ್ದರು. ಸಂಸಾರ ಸುಖವಗಿಯೇ ಇತ್ತು. ಆದ್ರೆ ಅದೇನಾಯಿತೋ ಏನೋ. ಶಿವರಾಜ್‌ ಜೋಷಿ ಆಸ್ಪತ್ರೆಗೆ ಹೋಗಿ ಬಂದ ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಕುಟುಂಬದವರಿಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಮೂರು ವರ್ಷದ ಮಗುವಿಗೂ ಕೂಡ ವಿಷ ಕುಡಿಸಿದ್ದಾನೆ. ಆ ಮಗು ವಿಷ ಕುಡಿಯಲು ನಿರಾಕರಿಸಿದಾಗ ಕತ್ತು ಸೀಳಿ ಆ ಮಗುವಿನ ಕೊಲೆ ಮಾಡಿದ್ದಾನೆ. ಹೆಂಡತಿಗೂ ಕೂಡ ವಿಷ ಕುಡಿಸಿದ್ದಾನೆ. ಆದ್ರೆ ಇನ್ನೊಬ್ಬ ಮಗಳು ನೀಲಂ ವಿಷ ಕುಡಿಯಲು ನಿರಾಕರಿಸಿ, ಮನೆಯಿಂದ ಓಡಿ ಹೋಗಿದ್ದಾಳೆ. ಹೀಗಾಗಿ ನೀಲಂ ಒಬ್ಬಳನ್ನು ಬಿಟ್ಟು ಮನೆಯಲ್ಲಿದ್ದ ಎಲ್ಲರೂ ಸಾಮೂಹಿಕವಾಗಿ ಸಾವಿಗೀಡಾಗಿದ್ದಾರೆ.

ಆಸ್ಪತ್ರೆಗೆ ಹೋಗಿ ಬಂದ ನಂತರ ಶಿವರಾಜ್ ಜೋಷಿ ಇಂತಹ ವಿಕೃತ ನಿರ್ಧಾರವನ್ನು ತೆಗೆದುಕೊಂಡಿದ್ದಾದರೂ ಎಕೆ? ಶಿವರಾಜ್‌ಗೆ ಆಸ್ಪತ್ರೆಯಲ್ಲಿ ಏನಾಯಿತು? ಶಿವರಾಜ್‌ಗೆ ಭಯಾನಕವಾದ ರೋಗ ಏನಾದ್ರೂ ಆವರಿಸಿತ್ತೆ? ಎಂಬ ಇತ್ಯಾದಿ ಪ್ರೆಶ್ನೆಗಳು ಸದ್ಯಕ್ಕೆ ಪ್ರೆಶ್ನೆಗಳಾಗಿಯೇ ಉಳಿದಿವೆ. ಆದ್ರೆ ಸೂಕ್ತ ಪೋಲೀಸ್ ತನಿಖೆಯಿಂದ ಮಾತ್ರ ಈ ಎಲ್ಲಾ ಪ್ರೆಶ್ನೆಗಳಿಗೆ ಉತ್ತರ ಸಿಗಲಿವೆ.

Share this Story:

Follow Webdunia kannada