Select Your Language

Notifications

webdunia
webdunia
webdunia
webdunia

ನಾನು, ಅಪ್ಪಾಜಿ ಜೆಡಿಎಸ್ ಸೇರಲ್ಲ: ಮಧು ಬಂಗಾರಪ್ಪ ಉವಾಚ

ನಾನು, ಅಪ್ಪಾಜಿ ಜೆಡಿಎಸ್ ಸೇರಲ್ಲ: ಮಧು ಬಂಗಾರಪ್ಪ ಉವಾಚ
ಶಿವಮೊಗ್ಗ , ಭಾನುವಾರ, 21 ಫೆಬ್ರವರಿ 2010 (16:22 IST)
ತಾವು ಹಾಗೂ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿ ಊಹಾಪೋಹದಿಂದ ಕೂಡಿದೆ ಇದರ ಹುರುಳಿಲ್ಲ ಎಂದು ಹೇಳಿದರು.

ಸಂಜೆವಾಣಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ದಂಡಾವತಿ ವಿರೋಧಿ ಹೋರಾಟ, ಪಕ್ಷಾತೀತ ಹೋರಾಟ ಇದು. ರೈತರ ಹೋರಾಟವಾಗಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಾಲ್ಗೊಂಡಿದ್ದರು. ಇದರಲ್ಲಿ ಯಾವುದೇ ರಾಜಕೀಯ ಅಡಗಿಲ್ಲ ಎಂದು ತಿಳಿಸಿದರು.

ಹೋರಾಟದಲ್ಲಿ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಭಾಗವಹಿಸದಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಎಐಸಿಸಿ ಆಗಲಿ, ಕೆಪಿಸಿಸಿ ಆಗಲಿ ಹೋರಾಟದಲ್ಲಿ ಭಾಗವಹಿಸಬೇಡಿ ಎಂದು ಹೇಳಿಲ್ಲ ಎಂದರು.

Share this Story:

Follow Webdunia kannada