ನಾಂದೇಡ ಎಕ್ಸ್ಪ್ರೆಸ್ನಲ್ಲಿ ಬೆಂಕಿ, 23 ಜನರು ಸಜೀವ ದಹನ
, ಶನಿವಾರ, 28 ಡಿಸೆಂಬರ್ 2013 (09:09 IST)
ನಾಂದೇಡ - ಬೆಂಗಳೂರು ಎಕ್ಸಪ್ರೇಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 23 ಜನರು ಸಜೀವ ದಹನವಾಗಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ 23 ಜನರು ಸಜೀವ ದಹನವಾಗಿದ್ದಾರೆ, ಇನ್ನು ಹೆಚ್ಚಿನ ಜನರು ಸತ್ತಿರಬಹುದು ಎಂದು ಆದರೆ ಸ್ಪಷ್ಟ ಸುದ್ದಿ ಸಿಗುತ್ತಿಲ್ಲ. 11
ಜನರಂತು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತು ಸಾಕಷ್ಟುಜನರಿಗೆ ಗಾಯಗಳಾಗಿವೆ. ಈ ರೈಲು ನಾಂದೇಡನಿಂದ ಬೆಂಗಳುರಿಗೆ ಹೊರಡುತ್ತಿತ್ತು. ಇಂದು ಬೆಳ್ಳಿಗೆ ಬೆಂಗಳೂರು ತಲುಪಬೇಕಾಗಿದ್ದ ರೈಲಿಗೆ ಅಗ್ನಿ ಅಫಘಾತವಾಗಿದೆ. ದಾರಿಯಲಿ ಪುಟ್ಬರ್ತಿಯ ಹತ್ತಿರ ರೈಲಿನಲ್ಲಿ ಎಸಿ ಭೋಗಿಯಲ್ಲಿ ಬೆಂಕಿ ಕಾಣಿಸಿದ ಕಾರಣ ಈ ಅನಾಹುತ ಸಂಬವಿಸಿದೆ ಎಂದು ಮೂಲಗಳು ತಿಳಿಸಿವೆ. ಮೃತಪಟ್ಟ ಸಂಭಂಧಿಕರಿಗೆ ತಲಾ 5 ಲಕ್ಷ ಪರಿಹಾರ ಧನ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುಮ ಖರ್ಗೆ ತಿಳಿಸಿದ್ದಾರೆ. ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚ ಕೂಡ ರೈಲ್ವೆ ಇಲಾಖೆ ಭರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.