Select Your Language

Notifications

webdunia
webdunia
webdunia
webdunia

ನರ್ಮ್‌ಗೆ ಹಣ ಬಿಡುಗಡೆ ಮಾಡ್ಬೇಡಿ: ಕೇಂದ್ರಕ್ಕೆ ಡಿಕೆಶಿ

ನರ್ಮ್‌ಗೆ ಹಣ ಬಿಡುಗಡೆ ಮಾಡ್ಬೇಡಿ: ಕೇಂದ್ರಕ್ಕೆ ಡಿಕೆಶಿ
ಬೆಂಗಳೂರು , ಶನಿವಾರ, 30 ಜನವರಿ 2010 (19:34 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವವರೆಗೆ ನರ್ಮ್ ಸೇರಿದಂತೆ ಯಾವುದೇ ಯೋಜನೆಗಳಿಗೂ ನಗರಕ್ಕೆ ಹಣ ಬಿಡುಗಡೆ ಮಾಡದಂತೆ ಕೇಂದ್ರ ಸರ್ಕಾರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ನರ್ಮ್ ಯೋಜನೆಯಿಂದ ಸಾವಿರಾರು ಕೋಟಿ ರೂ.ಗಳು ಹಣ ಬಿಡುಗಡೆಯಾಗುವಾಗ ರಾಜ್ಯ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಮೂಲಕ ಪಾಲಿಕೆ ಆಡಳಿತ ನಡೆಸುವಾಗ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿರುವುದನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪಿನಲ್ಲಿ ನಂಬಿಕೆಯಿಲ್ಲದ ರಾಜ್ಯ ಸರ್ಕಾರ ಹಿಂಬಾಗಿಲ ಮೂಲಕ ಪಿತೂರಿ ನಡೆಸಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡತ್ತಲೇ ಇದೆ ಎಂದು ಕಿಡಿಕಾರಿದರು.

Share this Story:

Follow Webdunia kannada