Webdunia - Bharat's app for daily news and videos

Install App

ನಟಿ ಜಯಂತಿ ಪುತ್ರನಿಂದ ಹಂಪಿಯಲ್ಲಿ ಭಾರಿ ಗೋಲ್‌ಮಾಲ್‌?

Webdunia
ಸೋಮವಾರ, 18 ನವೆಂಬರ್ 2013 (14:43 IST)
PR
PR
ಕನ್ನಡದ ಖ್ಯಾತ ಹಿರಿಯ ನಟಿ ಜಯಂತಿಯವರ ಮಗನ ಮೇಲೆ ಹಣ ಗುಳುಂ ಮಾಡಿದ ಆರೋಪ ಕೇಳಿ ಬಂದಿದೆ. ಅಷ್ಟೆ ಅಲ್ಲ, ಪ್ರವಾಸೋದ್ಯಮದ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂಬ ಕೂಗುಗಳೂ ಕೂಡ ಜಯಂತಿ ಪುತ್ರ ಕೃಷ್ಣಕುಮಾರ್‌ ಅವರ ಮೇಲೆ ಕೇಳಿಬಂದಿವೆ.

ಹಂಪಿ ಬೈನೈಟ್‌ ಯೋಜನೆಯನ್ನು ನಟಿ ಜಯಂತಿಯವರ ಪುತ್ರ ಕೃಷ್ಣಕುಮಾರ್‌ ಅವರ ಮಾಲೀಕತ್ವದ ಇನ್ನೋವೇಟಿವ್‌ ಲೈಟಿಂಗ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿಯೊಂದನ್ನು ಒಪ್ಪಿಕೊಂಡಿದ್ದ ಜಯಂತಿಯವರ ಮಗ ಅದನ್ನು ಇದುವರೆಗೂ ಪೂರ್ಣಗೊಳಿಸಿಲ್ಲ. ಕಳೆದ ಜನವರಿ ತಿಂಗಳಲ್ಲಿಯೇ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಣ ಪಡೆದುಕೊಂಡ ಇನೋವೆಟಿವ್‌ ಲೈಟಿಂಗ್‌ ಸಂಸ್ಥೆ ಇನ್ನು ಬಹಳಷ್ಟು ಕೆಲಸ ಬಾಕಿ ಉಳಿಸಿದೆ.

ಸುಮಾರು 11.45 ಕೋಟಿ ರೂಪಾಯಿಗಳ ಈ ಕಾಮಗಾರಿಯಲ್ಲಿ ಈಗಾಗಲೇ 8.50 ಕೋಟಿ ಹಣವನ್ನು ಕೃಷ್ಣ ಕುಮಾರ್‌ ಅವರಿಗೆ ಸಂದಾಯ ಮಾಡಲಾಗಿದೆ. ಆದಾಗ್ಯೂ ಕೂಡ ಕಾಮಗಾರಿ ಇನ್ನೂ ಮುಕ್ತಾಯಗೊಂಡಿಲ್ಲ. ಅಷ್ಟೇ ಅಲ್ಲ, ಕೃಷ್ಣ ಕುಮಾರ್‌ ಅವರು ಪ್ರವಾಸೋದ್ಯಮದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾಡಳಿತ ಆರೋಪಿಸಿದೆ. ಹೀಗಾಗಿ ಕೃಷ್ಣಕುಮಾರ್‌ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ರವಾನಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments