Select Your Language

Notifications

webdunia
webdunia
webdunia
webdunia

ನಂದಿಗಾವಿಯಲ್ಲಿ ಮತ್ತೊಬ್ಬ ಕಬ್ಬು ಬೆಳೆಗಾರನ ಆತ್ಮಹತ್ಯೆ ಯತ್ನ

ನಂದಿಗಾವಿಯಲ್ಲಿ ಮತ್ತೊಬ್ಬ ಕಬ್ಬು ಬೆಳೆಗಾರನ ಆತ್ಮಹತ್ಯೆ ಯತ್ನ
ಹರಿಹರ: , ಮಂಗಳವಾರ, 3 ಡಿಸೆಂಬರ್ 2013 (17:37 IST)
PR
PR
ಕಾರ್ಖಾನೆಯವರು ತಾನು ಬೆಳೆದಿದ್ದ ಕಬ್ಬು ಖರೀದಿಸದ ಹಿನ್ನೆಲೆಯಲ್ಲಿ ತೀವ್ರ ಮನನೊಂದ ರೈತನೊಬ್ಬ ನಂದಿಗಾವಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಾಲೇಶ್ ಎಂಬ ರೈತ 2 ಎಕರೆಯಲ್ಲಿ ಕಬ್ಬು ಬೆಳೆದಿದ್ದ . 15 ತಿಂಗಳಾದರೂ ಕಬ್ಬು ಕಾರ್ಖಾನೆಗೆ ಹೋಗದಿದ್ದರಿಂದ ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ದಾವಣಗೆರೆಯ ಹರಿಹರ ಮತ್ತು ರಾಣೆಬೆನ್ನೂರು ತಾಲೂಕು ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಗೆ ಅವನ ಜಮೀನು ಬರುತ್ತದೆ. ಹಾಲೇಶ್ ಕಬ್ಬು ಬೆಳೆಯುವುದಕ್ಕಾಗಿ 3-4 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.

ನಿಗದಿತ ಸಮಯದಲ್ಲಿ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಸ್ವೀಕರಿಸಲಿಲ್ಲವಾದ್ದರಿಂದ ಸಾಲಗಾರರಿಗೆ ಕೊಡಲು ಹಾಲೇಶ್ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ. ಈಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada