Select Your Language

Notifications

webdunia
webdunia
webdunia
webdunia

ನಂದನ್ ನಿಲೇಕಣಿ ಪರ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಚುನಾವಣೆ ಪ್ರಚಾರ

ನಂದನ್ ನಿಲೇಕಣಿ ಪರ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಚುನಾವಣೆ ಪ್ರಚಾರ
, ಸೋಮವಾರ, 31 ಮಾರ್ಚ್ 2014 (16:12 IST)
PR
PR
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರಿಗೆ ಸಾಹಿತಿಗಳು ಮತ್ತು ಕಲಾವಿದರು ಬೆಂಬಲ ಸೂಚಿಸಿದ್ದು, ಅವರ ಪರ ಚುನಾವಣೆ ಪ್ರಚಾರಕ್ಕೆ ನಿಂತಿದ್ದಾರೆ. ಹಿರಿಯ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ಜತೆ ವಿವಿಧ ಬಡಾವಣೆಗಳಿಗೆ ತೆರಳಿ ಮತಯಾಚನೆ ಮಾಡಿದರು. ಗಿರೀಶ್ ಕಾರ್ನಾಡ್ ಅವರ ಜತೆ ನಿರ್ದೇಶಕ ಚೈತನ್ಯ ಮುಂತಾದವರು ರೋಹಿಣಿ ಜೊತೆಗೆ ಜೆಪಿ ನಗರ , ಗಾಂಧಿ ಬಜಾರ್ ಮುಂತಾದ ಕಡೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ರಾಜಕಾರಣದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಸಾಮರ್ಥ್ಯ ನಂದನ್ ನಿಲೇಕಣಿ ಅವರಿಗಿದ್ದು, ಇಂತಹ ಅಭ್ಯರ್ಥಿಯನ್ನು ಬೆಂಬಲಿಸಿ ಮತ ನೀಡಿದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಕಾರ್ನಾಡ್ ಹೇಳಿದರು.

Share this Story:

Follow Webdunia kannada