ದೇವ್ರೆ ಯಡಿಯೂರಪ್ಪಗೆ ಒಳ್ಳೇದು ಮಾಡಪ್ಪಾ: ರೇಣುಕಾ ಪೂಜೆ
ಬೆಂಗಳೂರು , ಶುಕ್ರವಾರ, 23 ಡಿಸೆಂಬರ್ 2011 (13:32 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಆರೋಪಗಳಿಂದ ಮುಕ್ತರಾಗಬೇಕು. ಅವರಿಗೆ ಭವಿಷ್ಯತ್ತಿನಲ್ಲಿ ಪರಮಾತ್ಮ ಒಳ್ಳೇದು ಮಾಡಲಿ ಎಂದು ಅಬಕಾರಿ ಸಚಿವ, ಯಡಿಯೂರಪ್ಪ ಬಲಗೈಬಂಟ ಎಂದೇ ಗುರುತಿಸಿಕೊಂಡಿರುವ ಎಂ.ಪಿ.ರೇಣುಕಾಚಾರ್ಯ ಶುಕ್ರವಾರ ನಗರದ ದೊಡ್ಡ ಗಣೇಶ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಯಡಿಯೂರಪ್ಪನವರಿಗೆ ಬಂದೊದಗಿರುವ ವಿಘ್ನಗಳೆಲ್ಲವನ್ನೂ ಪರಿಹರಿಸಪ್ಪಾ ಎಂದು ಪ್ರಾರ್ಥಿಸಿ ಬಸವನಗುಡಿಯ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಸೇವೆ ಸಲ್ಲಿಸಿ ವಿಶೇಷ ಪೂಜೆ ಮಾಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕೂಡ ಸಾಥ್ ನೀಡಿದ್ದರು.ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪನವರ ಏಳಿಗೆ ಸಹಿಸಲಾರದೆ ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿ ಜೈಲಿಗೆ ಅಟ್ಟಿದ್ದಾರೆ. ಹಾಗಾಗಿ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಆರೋಪಗಳಿಂದ ಮುಕ್ತರಾಗಲಿ. ಅವರಿಗೆ ಭವಿಷ್ಯತ್ತಿನಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಿರುವುದಾಗಿ ಹೇಳಿದರು.ಯಡಿಯೂರಪ್ಪನವರು ನಮ್ಮ ನಾಯಕ. ಅವರ ನಾಯಕತ್ವದ ಭಾರತೀಯ ಜನತಾ ಪಕ್ಷಕ್ಕೆ ಬೇಕಾಗಿದೆ. ಪಕ್ಷದೊಳಗೆ ಯಾವುದೇ ಅಸಮಾಧಾನ, ಭಿನ್ನಮತ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.