Select Your Language

Notifications

webdunia
webdunia
webdunia
webdunia

ದೇವೇಗೌಡ ಕನಿಕರ ತೋರಿದ್ರೆ ಸಿಎಂ ಆಗಿರುತ್ತಿದ್ದೆ: ಪರಮೇಶ್ವರ್

ದೇವೇಗೌಡ ಕನಿಕರ ತೋರಿದ್ರೆ ಸಿಎಂ ಆಗಿರುತ್ತಿದ್ದೆ: ಪರಮೇಶ್ವರ್
ಬೆಂಗಳೂರು , ಶನಿವಾರ, 17 ಆಗಸ್ಟ್ 2013 (13:44 IST)
PR
ಜಾತ್ಯಾತೀತ ಜನತಾ ದಳದ ಮುಖಂಡರು ಕನಿಕರ ತೋರಿ ಮಾತನಾಡುತ್ತಿದ್ದಾರೆ. ಇಂತಹ ಕನಿಕರ ವಿಧಾನಸಭೆ ಚುನಾವಣೆಯಲ್ಲಿ ತೋರುತ್ತಿದ್ದಲ್ಲಿ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿಯವರ ಈ ಕನಿಕರ ಮುಂಬರುವ ದಿನಗಳಲ್ಲಿ ಕೂಡಾ ಹಾಗೇ ಇರಲಿ.ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಡಿಸಿಎಂ ಹುದ್ದೆ ನೀಡಿದ್ರೆ ಖಂಡಿತವಾಗಿ ಸಂತಸವಾಗುತ್ತದೆ ಎಂದು ಪರಮೇಶ್ವರ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ನನ್ನ ಬಗ್ಗೆ ಎಚ್‌ಡಿಕೆ ದೇವೇಗೌಡ ಮಾತನಾಡಿದ್ದಾರೆ. ಕುಮಾರಸ್ವಾಮಿ ಕೂಡಾ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ತೋರುತ್ತಿರುವ ಕನಿಕರ ವಿಧಾನಸಭೆ ಚುನಾವಣೆಯಲ್ಲಿ ತೋರಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.

Share this Story:

Follow Webdunia kannada