Select Your Language

Notifications

webdunia
webdunia
webdunia
webdunia

ತಾಳಿ ಕಟ್ಟಬೇಕಿದ್ದ ವರ ದಿಢೀರ್ ನಾಪತ್ತೆ: ಮದುವೆ ಕ್ಯಾನ್ಸಲ್

ತಾಳಿ ಕಟ್ಟಬೇಕಿದ್ದ ವರ ದಿಢೀರ್ ನಾಪತ್ತೆ: ಮದುವೆ ಕ್ಯಾನ್ಸಲ್
, ಭಾನುವಾರ, 15 ಡಿಸೆಂಬರ್ 2013 (11:46 IST)
PR
PR
ವಧುವಿಗೆ ತಾಳಿ ಕಟ್ಟಬೇಕಿದ್ದ ವರನೊಬ್ಬ ದಿಢೀರ್ ನಾಪತ್ತೆಯಾದ ಪ್ರಕರಣ ನೆಲಮಂಗಲದಲ್ಲಿ ವರದಿಯಾಗಿದೆ. ನೆಲಮಂಗಲದ ಕಲ್ಯಾಣಮಂಟಪವೊಂದರಲ್ಲಿ ನವೀನ್ ಕುಮಾರ್ ನೊಂದಿಗೆ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ವಿವಾಹಪೂರ್ವ ಎಲ್ಲ ಕಾರ್ಯಗಳಲ್ಲಿ ವರ ಭಾಗಿಯಾಗಿದ್ದರು. ಇವತ್ತು ಹಸೆಮಣೆ ಏರಬೇಕಿದ್ದ ವರ ನವೀನ್ ಯಾಕೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿಲ್ಲ. ಬಸ್‌ಸ್ಟಾಂಡ್‌ಗೆ ಹೋಗಿಬರುತ್ತೇನೆ ಎಂದೇಳಿ ಹೋದವರು ನಾಪತ್ತೆಯಾಗಿದ್ದಾರೆ. ನವೀನ್ ನೆಲಮಂಗಲದ ಹಿಪ್ಪಆಂಜನೇಯ ಲೇಔಟ್ ನಿವಾಸಿಯಾಗಿದ್ದಾರೆ.

ವರನಿಗಾಗಿ ಕಾದು, ಕಾದು ಬೇಸತ್ತ ವಧು ಮತ್ತು ವಧುವಿನ ಪೋಷಕರು ವರ ನಾಪತ್ತೆಯಾಗಿದ್ದರಿಂದ ಛತ್ರಕ್ಕೆ ಬೀಗ ಹಾಕಿ ಮನೆಗೆ ತೆರಳಿದರು. ವರ ನವೀನ್ ಗಂಗಾರಾಮಯ್ಯನ ಪುತ್ರಿಯೊಂದಿಗೆ ವಿವಾಹವಾಗಬೇಕಿತ್ತು. ವರನ ಸಂಬಂಧಿಕರೂ ಛತ್ರಕ್ಕೆ ಬಂದಿರಲಿಲ್ಲ. ಇದರಿಂದಾಗಿ ಇಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿದೆ.

Share this Story:

Follow Webdunia kannada