ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗ್ರಾಮವಾದ ಮೇಲುಕಾಮನಹಳ್ಳಿಯಲ್ಲಿ ತಂದೆಯೇ ತನ್ನ ಮೊದಲ ಪತ್ನಿಯ ಮಗಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಆರೋಪಿ ಶಿವಕುಮಾರ್ ತನ್ನ ಪತ್ನಿ ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಬೆದರಿಕೆಯೊಡ್ಡಿ ಪ್ರತಿದಿನ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿ ತಾಯಿ ವಿಚಾರಣೆ ನಡೆಸಿದಾಗ ಆರೋಪಿಯ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ತಾಯಿಯ ಮುಂದೆ ಬಾಯಿ ಬಿಟ್ಟಲ್ಲಿ ಹತ್ಯೆ ಮಾಡುವುದಾಗಿ ಪುತ್ರಿಗೆ ಆರೋಪಿ ಹೆದರಿಸಿದ್ದನು. ಆರೋಪಿ ಶಿವಕುಮಾರ್ನನ್ನು ಬಂಧಿಸಲಾಗಿದ್ದು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.