Select Your Language

Notifications

webdunia
webdunia
webdunia
webdunia

ಢುಂಢಿ ಲೇಖಕ ಯೋಗೇಶ್‌ಗೆ ಜಾಮೀನು, ಪುಸ್ತಕಕ್ಕೆ ನಿಷೇಧ

ಢುಂಢಿ ಲೇಖಕ ಯೋಗೇಶ್‌ಗೆ ಜಾಮೀನು, ಪುಸ್ತಕಕ್ಕೆ ನಿಷೇಧ
, ಶುಕ್ರವಾರ, 30 ಆಗಸ್ಟ್ 2013 (20:13 IST)
PR
PR
ಬೆಂಗಳೂರು: ಗಣೇಶನನ್ನು ಕ್ರೂರವಾಗಿ ಚಿತ್ರಿಸಿದ ಢುಂಢಿ ಪುಸ್ತಕದ ಲೇಖಕ ಯೋಗೇಶ್ ಮಾಸ್ಟರ್ ಅವರಿಗೆ ಶುಕ್ರವಾರ ಜಾಮೀನು ನೀಡಲಾಗಿದೆ. ಗಣೇಶನನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. 8ನೇ ಎಸಿಎಂಎಂ ಕೋರ್ಟ್ ಅವರ ಜಾಮೀನು ಅರ್ಜಿಯ ವಿಚಾರಣೆ ಮಾಡಿ ಜಾಮೀನು ನೀಡಿದೆ.

ಇದರ ಬೆನ್ನಹಿಂದೆಯೇ ವಿವಾದಿತ ಢುಂಢಿ ಪುಸ್ತಕದ ಮಾರಾಟವನ್ನು ಸಿಟಿ ಸಿವಿಲ್ ಕೋರ್ಟ್ ನಿಷೇಧಿಸಿದೆ. ಈ ಪುಸ್ತಕದ ಮಾರಾಟದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ಹಿನ್ನೆಲೆಯಲ್ಲಿ ಈ ಪುಸ್ತಕದ ಮಾರಾಟವನ್ನು ನಿಷೇಧಿಸಲಾಗಿದೆ. ಈ ಪುಸ್ತಕ ಮಾರಾಟವನ್ನು ನಿಷೇಧಿಸಬೇಕೆಂದು ಪ್ರಮೋದ್ ಮುತಾಲಿಕ್ ಅರ್ಜಿ ಸಲ್ಲಿಸಿದ್ದರು.

Share this Story:

Follow Webdunia kannada