Select Your Language

Notifications

webdunia
webdunia
webdunia
webdunia

ಡಿವಿಎಸ್ ಚಹಾಕೂಟ ಆಹ್ವಾನಕ್ಕೆ ವಿಪಕ್ಷ ನಾಯಕರ ನಕಾರ

ಡಿವಿಎಸ್ ಚಹಾಕೂಟ ಆಹ್ವಾನಕ್ಕೆ ವಿಪಕ್ಷ ನಾಯಕರ ನಕಾರ
ಬೆಂಗಳೂರು , ಶನಿವಾರ, 20 ಆಗಸ್ಟ್ 2011 (12:20 IST)
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಪ್ರತಿಪಕ್ಷದ ನಾಯಕರಿಗೆ ಏರ್ಪಡಿಸಿದ್ದ ಚಹಾಕೂಟ ರದ್ದಾಗಿದೆ. ಪ್ರತಿಪಕ್ಷ ನಾಯಕರು ಈ ಚಹಾಕೂಟದಲ್ಲಿ ಭಾಗವಹಿಸಲು ನಿರಾಕರಿಸಿರುವುದೇ ಇದಕ್ಕೆ ಕಾರಣ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರತಿಪಕ್ಷಗಳ ಮುಖಂಡರನ್ನು ಪ್ರತಿ ವಾರ ಭೇಟಿಯಾಗಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು. ತಾವು ನೀಡಿದ್ದ ಭರವಸೆಯಂತೆ ಉಭಯ ಸದನಗಳ ಪ್ರತಿಪಕ್ಷ ನಾಯಕರಿಗಾಗಿ ಉಪಹಾರ ಕೂಟ ಏರ್ಪಡಿಸಿದ್ದರು.

ಈ ಕುರಿತು ಪ್ರತಿಪಕ್ಷ ನಾಯಕರಿಗೆ ಆಹ್ವಾನ ಪತ್ರ ಕಳುಹಿಸಿದ್ದ ಸಿಎಂ, ದೂರವಾಣಿ ಮೂಲಕವೂ ವೈಯಕ್ತಿಕವಾಗಿ ಆಹ್ವಾನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತುಕತೆಯ ಉದ್ದೇಶವನ್ನು ತಿಳಿಸದೇ ಇರುವುದರಿಂದ ತಾವು ಆ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದರು.

Share this Story:

Follow Webdunia kannada