Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಶಾಸಕರ ಕ್ಷೇತ್ರಾಭಿವೃದ್ದಿ ಮಾಡ್ತೀವಿ ಆದ್ರೆ ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ಕೈ ಬಿಡಲ್ಲ.

ಜೈಲಿನಲ್ಲಿರುವ ಶಾಸಕರ ಕ್ಷೇತ್ರಾಭಿವೃದ್ದಿ ಮಾಡ್ತೀವಿ ಆದ್ರೆ ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ಕೈ ಬಿಡಲ್ಲ.
ಬಳ್ಳಾರಿ , ಶುಕ್ರವಾರ, 18 ಅಕ್ಟೋಬರ್ 2013 (10:58 IST)
PR
PR
ಜೈಲಿಗೆ ಹೋಗಿರುವ ಮೂವರು ಶಾಸಕರ ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇವೆ. ನಾವು ಯಾರ ಬಗ್ಗೆಯೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನಿಜವಾಗಲೂ ಅಕ್ರಮ ಎಸಗಿದ್ದರೆ ಅಂಥವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಆದರೆ ಸಂತೋಷ್‌ ಲಾಡ್‌ ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರನ್ನು ಕೈ ಬಿಡುವ ಪ್ರೆಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ನ ನಾಯಕ ಪರಮೇಶ್ವರ್‌ ನಾಯಕ್‌ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಬಳ್ಳಾರಿಯ ಕಾಂಗ್ರೆಸ್‌ ಮುಖಂಡ ಪರಮೇಶ್ವರ್‌ ನಾಯಕ್‌ ಸಂತೋಷ್‌ ಲಾಡ್‌ ವಿಷಯದಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. " ತಪ್ಪು ಮಾಡಿದವರು ಈಗಾಗಲೇ ಜೈಲಿನಲ್ಲಿದ್ದಾರೆ. ಆದ್ರೆ ಸಂತೋಷ್‌ಲಾಡ್‌ ತಪ್ಪು ಮಾಡಿಲ್ಲ. ಹೀಗಾಗಿ ಸಂತೋಷ್‌ಲಾಡ್‌ ಅವರನ್ನು ಸಂಪುಟದಿಂದ ಕೈ ಬಿಡುವ ಯೋಚನೆಯೇ ಇಲ್ಲ. ಇದನ್ನು ಈಗಾಗಲೇ ಸಿಎಂ ಸಿದ್ರಾಮಯ್ಯನವರು ಕೂಡ ಸ್ಪಷ್ಟ ಪಡಿಸಿದ್ದಾರೆ ಎಂದು ಪರಮೇಶ್ವರ್‌ ನಾಯಕ್ ಹೇಳಿದ್ರು.

ನಾವು ಯಾರ ಬಗ್ಗೆಯೂ ದ್ವೇಶದ ರಾಜಕಾರಣ ಮಾಡುವುದಿಲ್ಲ. ತಪ್ಪು ಮಾಡಿದವರು ಈಗಾಗಲೇ ಜೈಲಿನಲ್ಲಿದ್ದಾರೆ. ಇದನ್ನು ಅರಿತುಕೊಂಡು ಶ್ರೀರಾಮುಲು ವಿವೇಚನೆಯಿಂದ ಮಾತಾಡಬೇಕು ಎಂದು ಶ್ರೀ ರಾಮುಲು ಮಾತಿಗೆ ತಿರುಗೇಟು ನೀಡಿದ್ರು.

Share this Story:

Follow Webdunia kannada