Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಂದೊಂದು ದಿನ ಅಧಿಕಾರ ಪಡೆಯಲಿದೆ : ದೇವೇಗೌಡರ ಭವಿಷ್ಯ

ಜೆಡಿಎಸ್ ಮುಂದೊಂದು ದಿನ ಅಧಿಕಾರ ಪಡೆಯಲಿದೆ : ದೇವೇಗೌಡರ ಭವಿಷ್ಯ
, ಶುಕ್ರವಾರ, 13 ಸೆಪ್ಟಂಬರ್ 2013 (13:21 IST)
PR
PR
ಬೆಂಗಳೂರು: ಜೆಡಿಎಸ್ ಪಕ್ಷವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಮುಂದೊಂದು ದಿನ ಜೆಡಿಎಸ್ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಅವರು ಭವಿಷ್ಯ ನುಡಿದರು. ಎ.ಕೃಷ್ಣಪ್ಪ ಅವರ ಮಡಿಲಿಗೆ ನೂತನ ರಾಜ್ಯಾಧ್ಯಕ್ಷರಾಗಿ ಮಹತ್ವದ ಜವಾಬ್ದಾರಿ ವಹಿಸಿದ್ದೇವೆ ಎಂದೂ ಗೌಡರು ಹೇಳಿದರು.

ತಂತ್ರಗಾರಿಕೆಯಿಂದ ಕಾಂಗ್ರೆಸ್ ನನ್ನನ್ನು ಮುಗಿಸಿತು ಎಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರದ ಬಳಿಕ ಕೃಷ್ಣಪ್ಪ ಹೇಳಿದ್ದಾರೆ. ಜೆಡಿಎಸ್‌ನಿಂದ ನನಗೆ ರಾಜಕೀಯ ಪುನರ್ಜನ್ಮ ಸಿಕ್ಕಿದೆ ಎಂದು ಕೃಷ್ಣಪ್ಪ ಹೇಳಿದರು. ಮಂಡ್ಯ ಮತ್ತು ಬೆಂಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿನ ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತೆರವಾಗಿತ್ತು.

Share this Story:

Follow Webdunia kannada