Select Your Language

Notifications

webdunia
webdunia
webdunia
webdunia

ಜೂಜುಕೋರ ಮಗ ಮಂಜುನಾಥ್ ಈಗ ಪೊಲೀಸರ ಅತಿಥಿ

ಜೂಜುಕೋರ ಮಗ ಮಂಜುನಾಥ್ ಈಗ ಪೊಲೀಸರ ಅತಿಥಿ
, ಮಂಗಳವಾರ, 17 ಸೆಪ್ಟಂಬರ್ 2013 (13:35 IST)
PR
PR
ಮೈಸೂರು: ಜೂಜುಕೋರ ಮಗ ಪೊಲೀಸ್ ಅತಿಥಿಯಾಗಿರುವ ಘಟನೆ ಮೈಸೂರಿನ ಉತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗ ಮಂಜುನಾಥ್‌ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ ಈ ಮಗ ಪೊಲೀಸ್ ಅತಿಥಿಯಾಗಿದ್ದಾನೆ. ಜೂಜು, ಕುಡಿತಕ್ಕೆ ದಾಸನಾದ ಯುವಕ ಹಣಕ್ಕಾಗಿ ತಂದೆ,. ತಾಯಿಯನ್ನು ಕೊಲ್ಲಲು ಯತ್ನಿಸಿದ್ದ. ಮೈಸೂರು ಸಮೀಪದ ಉತ್ತನಹಳ್ಳಿ ಗ್ರಾಮದ ಯುವಕ ಜೂಜು, ಕುಡಿತಕ್ಕೆ ದಾಸನಾಗಿ ಲಕ್ಷಾಂತರ ರೂ.ಹಣವನ್ನು ಪೋ,ಕರಿಗೆ ನಷ್ಟ ಮಾಡಿದ್ದ. ಕ್ರಿಕೆಟ್ ಬೆಟ್ಟಿಂಗ್ ಜೂಜನ್ನು ಕೂಡ ಅವನು ಆಡುತ್ತಿದ್ದ.

ನಿನ್ನೆ ಹಣ ಕೊಡುವಂತೆ ಬೆದರಿಕೆ ಹಾಕಿದ ಪುತ್ರ ತಂದೆ, ತಾಯಿಗಳಿಗೆ ಚಾಕು ತೋರಿಸಿ ಬೆದರಿಸಿ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಆಗ ತಂದೆ, ತಾಯಿಗಳು ಇವನ ಕೈಕಾಲುಗಳನ್ನು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Share this Story:

Follow Webdunia kannada